ಇಂದು ಬ್ಯಾಡಗಿ ಬಂದ್: ನಮಗೆ ಸೂಕ್ತ ರಕ್ಷಣೆ ನೀಡಿ: ಮುರಿಗೆಪ್ಪ ಶೆಟ್ಟರ
ಬ್ಯಾಡಗಿ 04: ಕೆಲವರು ಬ್ಯಾಡಗಿ ಬಂದಿದೆ ಕರೆ ಕೊಟ್ಟಿದ್ದು ಕಾರಣ ನಾವು ಬ್ಯಾಡಗೆ ಮೇನ್ರೋಡ್ ನಲ್ಲಿರುವ ಮೇನ್ ಮಾರ್ಕೆಟ್ನ ವ್ಯಾಪಾರಸ್ಥರು ಬೆಂಬಲ ಕೊಡುವುದಿಲ್ಲ ಎಂದು ಮೇನ್ರೋಡ್ ನ ನಿವಾಸಿ ಮುರಿಗೆಪ್ಪ ಶೆಟ್ಟರ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ತಹಶೀಲ್ದಾರ್ ಅವರ ಅನುಪಸ್ಥಿತಿಯಲ್ಲಿ ಶಿರಸ್ತೆದಾರರಾದ ನಾಗರತ್ನ ಕಾಳೆಯವರಿಗೆ ಮನವಿ ಪತ್ರವನ್ನು ನೀಡಿ ಮಾತನಾಡಿದವರು ರಸ್ತೆ ಅಗಲೀಕರಣಕ್ಕಾಗಿ ಬ್ಯಾಡಗಿ ಬಂದ್ಗೆ ಕರೆ ನೀಡಿದ್ದು ಆ ದಿನ ನಮ್ಮ ಮೇನ್ರೋಡ್ ನಲ್ಲಿರುವ ಅಂಗಡಿಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಮತ್ತು ಆಗಬಹುದಾದ ಅಹಿತಕರ ಘಟನೆಗಳ ನಡೆಯದ ಹಾಗೆ ತಪ್ಪಿಸಲು ಪೊಲೀಸ ಇಲಾಖೆಯ ಸೂಚನೆಯಂತೆ ಆ ದಿನವನ್ನು ಬಂದ್ ಮಾಡಲಾಗುವುದು ಆದರೆ ಬಂದ್ಗೆ ನಮ್ಮ ಬೆಂಬಲವಿರುವುದಿಲ್ಲ ಮತ್ತು ಮುಖ್ಯರಸ್ತೆಯಲ್ಲಿ ಮಾಲೀಕರ ಹೇಗೆ ಯಾವುದೇ ತೊಂದರೆ ಆಗದ ಹಾಗೆ ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಬೇಕು ಅಲ್ಲಿನ ನಿವಾಸಿಗಳಿಗೆ ಯಾವುದೇ ಹಿತಕರ ಘಟನೆ ನಡೆದಿಲ್ಲ ತಾಲೂಕು ಆಡಳಿತವೇ ನೇರ ಹೊಣೆ ಆಗಿರುತ್ತದೆ ಎಂದು ಹೇಳಿದರು.
ಪರಶುರಾಮ್ ಮೇಲಗಿರಿ ಮಾತನಾಡಿ ಸದರಿ ಮುಖ್ಯೆ ರಸ್ತೆ ಅಗಲೀಕರಣದ ವಿಷಯ ಧಾರವಾಡ ಹೈಕೋರ್ಟ್ ನಲ್ಲಿದ್ದು ನ್ಯಾಯಕ್ಕೆ ಗೌರವ ಕೊಡುವುದು ಎಲ್ಲರೂ ಕರ್ತವ್ಯ ಆಗಿದ್ದು ಸದರಿ ಮೇನ್ ರೋಡ್ ನಲ್ಲಿ ಬ್ಯಾಡಗಿ ಮೇನೆ ಮಾರುಕಟ್ಟೆಯಾಗಿದ್ದು ಜನರಿಗೆ ಬೇಕಾಗುವ ಎಲ್ಲ ವಸ್ತುಗಳು ಮಾರಾಟದ ವ್ಯಾಪಾರ ಕೇಂದ್ರವಾಗಿದ್ದು ಮೇನ್ ಮಾರುಕಟ್ಟೆಗೆ ಬರುವ 10,000 ಜನರಿಗೆ ತೊಂದರೆ ಆಗದ ಹಾಗೆ ಬೈಪಾಸ್ ರಿಂಗ್ರೋಡ್ ಮೂಲಕ ಮತ್ತು ಒನವೇ ಮಾಡುವ ಮೂಲಕ ಸಮಸ್ಯೆ ಬಗೆಹರಿಸಲು ವಿನಂತಿಸಿಕೊಂಡಿದ್ದು ಇದೇ ಕಾರಣ ಗುರುವಾರದಂದು ಬ್ಯಾಡಗಿ ಬಂದ್ಗೆ ನಮ್ಮ ಬೆಂಬಲ ಇಲ್ಲ ಹಾಗೂ ನಮಗೆ ನಮ್ಮ ಅಂಗಡಿಗಳಿಗೆ ಸೂಕ್ತ ಬಂದೋಬಸ್ತ್ ಹಾಗೂ ರಕ್ಷಣೆಕೊಡಲು ವಿನಂತಿಸಿದರು.ಈ ಸಂದರ್ಭದಲ್ಲಿ ಗುಡ್ಡಪ್ಪ ಹಾದಿಮನಿ, ರಾಮಚಂದ್ರ ಅಗಡಿ, ಜಿ ಎಲ್ಅಗಡಿ, ಮುಸ್ತಪಾ ಷಾ ಮಕಾಂದಾರ.ಚೇತನ ಕಬ್ಬೂರ. ರಾಜು ಹೆಡಿಯಾಲ.ಹಾಗೂ ಅನೇಕರು ಉಪಸ್ಥಿತರಿದ್ದರು.