ಹತ್ತಿ ಬೆಳೆಗಳಿಗೆ ಬಾಯರ್ನ ’ಟ್ರಾನ್ಸ್’ ನೂತನ ಕೀಟನಾಶಕ ಬಿಡುಗಡೆ
Bayer launches new 'Trans' insecticide for cotton crops
ಬಳ್ಳಾರಿ 23: ಕೀಟನಾಶಕ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಾಯರ್ ಕಂಪನಿಯು ಹತ್ತಿ ಬೆಳೆಗಳಲ್ಲಿನ ರಸಹೀರುವ ಕೀಟಗಳ ನಿಯಂತ್ರಣಕ್ಕಾಗಿ ’ಟ್ರಾನ್ಸ್’ ಎಂಬ ನೂತನ ಕೀಟನಾಶಕವನ್ನು ಬಿಡುಗಡೆ ಮಾಡಿದೆ. ಹೇನು , ಜಸ್ಸಿಡ್ಸ್ (ಎಛಿ), ವೈಟ್ಫ್ಲೈ ನಿಮ್ಫ್ಗಳು ಸೇರಿದಂತೆ ವಿವಿಧ ರಸಹೀರುವ ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಈ ಉತ್ಪನ್ನವನ್ನು ಅಭಿವೃದ್ಧಿಪಡಿಸಲಾಗಿದೆ. ಪರಸ್ಪರ ಪೂರಕವಾದ ಎರಡು ಕಾರ್ಯವಿಧಾನಗಳನ್ನು ಒಂದೇ ಉತ್ಪನ್ನದಲ್ಲಿ ಸಂಯೋಜಿಸಿರುವ ಟ್ರಾನ್ಸ್, ಕೀಟ ನಿಯಂತ್ರಣದ ಜೊತೆಗೆ ಬೆಳೆಗಳ ಆರೋಗ್ಯ, ಉತ್ಪಾದಕತೆ ಹಾಗೂ ರೈತರ ಲಾಭದಾಯಕತೆಯನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಕಂಪನಿ ತಿಳಿಸಿದೆ.
ಜುಲೈ 2026ರಿಂದ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ತಮಿಳುನಾಡು, ಕೇರಳ, ರಾಜಸ್ಥಾನ, ಆಂಧ್ರ್ರದೇಶ, ತೆಲಂಗಾಣ, ಪಂಜಾಬ್, ಹರಿಯಾಣ ಹಾಗೂ ಪಶ್ಚಿಮ ಬಂಗಾಳದ ಪ್ರಮುಖ ಹತ್ತಿ ಬೆಳೆ ಪ್ರದೇಶಗಳಲ್ಲಿ ಈ ಉತ್ಪನ್ನ ಲಭ್ಯವಾಗಲಿದೆ. ಭಾರತದಲ್ಲಿ ಹತ್ತಿ ಬೆಳೆಗಳಿಗೆ ಒಂದೇ ಸಮಯದಲ್ಲಿ ವಿವಿಧ ರಸಹೀರುವ ಕೀಟಗಳ ದಾಳಿ, ಕೀಟಗಳಲ್ಲಿ ಹೆಚ್ಚುತ್ತಿರುವ ಪ್ರತಿರೋಧ ಸಾಮರ್ಥ್ಯ ಹಾಗೂ ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದ ಪರಿಹಾರಗಳ ಕೊರತೆಯಿಂದ ರೈತರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಾನ್ಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಟ್ರಾನ್ಸ್ ದ್ವಿಮುಖ ವ್ಯವಸ್ಥಾತ್ಮಕ ಚಲನೆ ಹಾಗೂ ಟ್ರಾನ್ಸ್ಲ್ಯಾಮಿನರ್ ಕ್ರಿಯಾಶೀಲತೆಯನ್ನು ಹೊಂದಿದ್ದು, ಹಳೆಯ ಹಾಗೂ ಹೊಸದಾಗಿ ಬೆಳೆಯುವ ಎಲೆಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ. ಮಳೆ-ನಿರೋಧಕ ಗುಣ ಹೊಂದಿರುವುದರಿಂದ ಸಿಂಪಡಿಸಿದ ಎರಡು ಗಂಟೆಗಳ ಬಳಿಕವೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಸಮಗ್ರ ಕೀಟ ನಿರ್ವಹಣಾ ಕಾರ್ಯಕ್ರಮಗಳಿಗೆ ಹೊಂದಿಕೊಳ್ಳುವ ಮೂಲಕ ಸುಸ್ಥಿರ ಕೃಷಿಗೆ ಬೆಂಬಲ ನೀಡುತ್ತದೆ.
ಇದು ಕೀಟಗಳ ಆಹಾರ ಸೇವನೆಯನ್ನು ಶೀಘ್ರವಾಗಿ ತಡೆಯುವುದರಿಂದ ಬೆಳೆ ಹಾನಿಯನ್ನು ಕಡಿಮೆ ಮಾಡಿ, ಪದೇಪದೇ ಕೀಟನಾಶಕ ಸಿಂಪಡಿಸುವ ಅಗತ್ಯವನ್ನು ತಗ್ಗಿಸುತ್ತದೆ. ಪರಿಣಾಮವಾಗಿ ಉತ್ತಮ ಇಳುವರಿ ಮತ್ತು ರೈತರ ಹೂಡಿಕೆಗೆ ಹೆಚ್ಚಿನ ಪ್ರತಿಫಲ ದೊರೆಯಲು ಸಹಕಾರಿಯಾಗಲಿದೆ ಎಂದು ಕಂಪನಿ ಹೇಳಿದೆ. ಈ ಕುರಿತು ಬಾಯರ್ ಕ್ರಾಪ್ ಸೈನ್ಸ್ ವಿಭಾಗದ ಭಾರತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಬಾಬು ಮಾತನಾಡಿ,
"ರೈತರು ಎದುರಿಸುತ್ತಿರುವ ಬದಲಾಗುತ್ತಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಟ್ರಾನ್ಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಒಂದೇ ಉತ್ಪನ್ನದಲ್ಲಿ ಎರಡು ಪೂರಕ ಕಾರ್ಯವಿಧಾನಗಳನ್ನು ಸಂಯೋಜಿಸಿರುವ ಈ ಕೀಟನಾಶಕ ಪರಿಣಾಮಕಾರಿ ಹಾಗೂ ಸುಸ್ಥಿರ ಕೀಟ ನಿರ್ವಹಣೆಗೆ ನೆರವಾಗಿ, ಬೆಳೆಗಳ ಆರೋಗ್ಯ, ಉತ್ಪಾದಕತೆ ಮತ್ತು ರೈತರ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ" ಎಂದು ಹೇಳಿದರು. ಟ್ರಾನ್ಸ್ ಕೀಟನಾಶಕವು 100 ಮಿ.ಲೀ., 220 ಮಿ.ಲೀ. ಮತ್ತು 500 ಮಿ.ಲೀ. ಪ್ಯಾಕ್ಗಳಲ್ಲಿ ಲಭ್ಯವಿರುತ್ತದೆ ಎಂದು ಬಾಯರ್ ತಿಳಿಸಿದೆ.
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು 