ಶಾಲಾ ಶಿಕ್ಷಕರ ಸಂಘಕ್ಕೆ ಜಿಲ್ಲಾ ಅಧ್ಯಕ್ಷರಾಗಿ ಬಸವಾರಾಜ ಶಿಡೇನೂರು ಆಯ್ಕೆ

Basavaraja Shidenur elected as district president of school teachers' association

ರಾಣೇಬೆನ್ನೂರು 28 : ಜಿಲ್ಲೆಯ ಹೋರಾಟ ಸಮಿತಿಯ ಹಿರಿಯ ನಾಯಕ, ಪ್ರಧಾನ ಗುರು, ವಿವಿಧ ಕ್ಷೇತ್ರ ಸಾಧಕ  ಶಿಕ್ಷಕರಾದ  ಬಸವರಾಜ ಶಿಡೇನೂರ ಅವರು ಬೆಂಗಳೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾವೇರಿ ಜಿಲ್ಲಾ ಘಟಕ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ಅವಿರೋಧ ಆಯ್ಕೆಯಿಂದಾಗಿ ಹಾವೇರಿ ತಾಲೂಕಿನ ಶಿಕ್ಷಕರ ಬಳಗಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ಅವರ ಅಧಿಕಾರದ ಅವಧಿಯಲ್ಲಿ ಜಿಲ್ಲೆಯ ಶಿಕ್ಷಕ ಬಳಗಕ್ಕೆ ಎಲ್ಲಾ ರೀತಿಯ ಅನುಕೂಲ ದೊರೆಯುವಂತಾಗಲಿ  ಎಂದು ಶಿಕ್ಷಕ ಬಳಗವು ಆಶಿಸಿ ಅಭಿನಂದಿಸಿದೆ. ನೂತನ ಅಧ್ಯಕ್ಷ ಬಸವರಾ 

ಜ ಶಿಡೇನೂರ ಅವರ ಅಭಿನಂದನಾ ಸಮಾರಂಭವು ಇತ್ತೀಚಿಗೆ ನಡೆಯಿತು. ಈ ಸಂದರ್ಭದಲ್ಲಿ ಶಿಕ್ಷಕ ಸಮೂಹದ ಮುಖಂಡರಾದ ಎಂ. ಎ. ಜಹಗೀರದಾರ, ಜಿಲ್ಲಾ ಸಂಘದ ಪದಾಧಿಕಾರಿಗಳಾದ ,  ಅನುರಾಧ ಬಡಿಗೇರ್, ಬಿ. ಎಸ್‌. ಚೆಲ್ಲಾಳ, ಶೇತಸನದಿ, ಎಂ. ಎಸ್‌.ಬಡಿಗೇರ್, ಇ. ಸಿ. ಅಗಸಿಬಾಗಿಲ, ಶಿವು ಆಲದಕಟ್ಟಿ, ಸಿ.ಜಿ. ಪಾಟೀಲ್, ಆರ್‌.ವೈ. ಗೋಣೆಪ್ಪನವರ, ಎಸ್‌.ಟಿ.  ಕೋಟಿಹಾಳ, ಬಸವರಾಜ ಅರಳಿ, ಪುಟ್ಟಪ್ಪನವರ್, ರಮೇಶ್ ಪೂಜಾರ, ಎಂ.ಎಲ್‌. ಮಕ್ಬುಲ್, ವಿಜಯೇಂದ್ರ ಯತ್ತಿನಹಳ್ಳಿ,, ಎಚ್‌. ಎಮ್‌. ಸುತಾರ್, ಬಿ. ಎಫ್‌.ದೊಡ್ಡಮನಿ, ಎಸ್‌. ಎಚ್, ಮೇಟಿ , ರಮೇಶ ಎಳೇಹೊಳಿ , ಮರಡೆಪ್ಪ ಕಂತಿ ,ಎಲ್‌.ಎಂ. ಹನುಮರಡ್ಡೇರ, ಶ್ರೀಮತಿ ಅನಿತಾ ಕಿತ್ತೂರು, ಸೇರಿದಂತೆ ಮತ್ತ್‌ ಇತರರು  ಉಪಸ್ಥಿತರಿದ್ದರು.ಊ28-