ಹೂವಿನಹಡಗಲಿಯಲ್ಲಿ ಬಸವಣ್ಣನವರ ಜಯಂತಿ

ಹೂವಿನಹಡಗಲಿಯಲ್ಲಿ ಬಸವಣ್ಣನವರ ಜಯಂತಿ  Basavanna's birthday in a flower boat

ಲೋಕದರ್ಶನ ವರದಿ 

ಹೂವಿನಹಡಗಲಿ 21: 12ನೇ ಶತಮಾನದಲ್ಲಿ ಶರಣರ ಚಿಂತನ-ಮಂಥನಗಳಲ್ಲಿ ಶೋಷಿತರ ಧ್ವನಿಯಾಗಿ, ಸಮ ಸಮಾಜ ನಿರ್ಮಾಣಕ್ಕೆ  ಬಸವಣ್ಣ ಶ್ರಮಿಸಿದ್ದಾರೆ ಎಂದು  ಮಾಡಿದ್ದಾರೆಂದು ಶಾಸಕ ಕೃಷ್ಣನಾಯ್ಕ ಹೇಳಿದರು.ಇಲ್ಲಿನ ಹಿರೇಮಲ್ಲಕೆರೆ ಮಠದಲ್ಲಿ ತಾಲೂಕು ಆಡಳಿತ, ಅಖಿಲ ಭಾರತ ವೀರಶೈವ ಮಹಾಸಭಾ ಸಹಯೋಗದಲ್ಲಿ ಆಯೋಜಿಸಿದ್ದ ಬಸವಣ್ಣನವರ 893ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ ಮಾತನಾಡಿದರು.ಅಖಿಲ ವೀರಶೈವ ಮಹಾಸಭಾ ನಗರ ಘಟಕದ ಅಧ್ಯಕ್ಷ ಉಮೇಶ ಮುಂಡವಾಡ, ಪ್ರಾಚಾರ್ಯಡಾ.ಬಸವರಾಜ ಟಿ.ಎಚ್‌. ಮಾತನಾಡಿದರು. ಸಾನಿಧ್ಯವನ್ನು ಗವಿಸಿದ್ದೇಶ್ವರ ಮಠದ ಡಾ.ಹಿರಿಶಾಂತವೀರಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಅಭಿನವ ಚೆನ್ನಬಸವಸ್ವಾಮೀಜಿ, ಶ್ರೀರಾಮ ದೇವರ ದೇವಸ್ಥಾನದ ಧರ್ಮದರ್ಶಿ ರಾಕೇಶಯ್ಯ ರಾಮಸ್ವಾಮಿ ವಹಿಸಿದ್ದರು.ಪ್ರವಚನಕಾರ ಶೇಖರಯ್ಯ, ಕೋಡಿಹಳ್ಳಿ ಮುದುಕಪ್ಪ, ಬಿ.ಬಿ.ಅಸುಂಡಿ, ಬಸೆಟ್ಟಿ ಸಿದ್ದೇಶ, ರಾಜಣ್ಣ, ಸೊಪ್ಪಿನ ಮಂಜುನಾಥ ಇದ್ದರು.ಇದಕ್ಕೂ ಮುನ್ನ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಂಗಳ ವಾದ್ಯಗಳೊಂದಿಗೆ, ಬಸವಣ್ಣನವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.