ಹಂಪಿ ಉತ್ಸವದಲ್ಲಿ ಎಸ್.ಎಂ.ಪೃಥ್ವಿ ಭಾವಗೀತೆಗೆ ಮನಸೋತ ಪ್ರೇಕ್ಷಕರು
Audience mesmerized by SM Prithvi's lyric at Hampi Festival
ಕಂಪ್ಲಿ 17: ಇತ್ತೀಚೆಗೆ ಹಂಪಿಯಲ್ಲಿ ನಡೆದ ಉತ್ಸವದಲ್ಲಿ ಕಂಪ್ಲಿ ನಿವಾಸಿ ಎಸ್.ಎಂ.ಪೃಥ್ವಿ ಎಂಬ ಕಲಾವಿದ ಭಾವಗೀತೆ ಹಾಡುವ ಮೂಲಕ ಜನರನ್ನು ರಂಜಿಸಿ, ಪ್ರಶಸ್ತಿ ಪ್ರಮಾಣ ಪತ್ರ ಪಡೆದುಕೊಂಡು, ಕಂಪ್ಲಿಯ ಕೀರ್ತಿ ಪತಾಕಿ ಹಾರಿಸಿದ್ದಾನೆ.
ಮೂರು ದಿನದ ಹಂಪಿ ಉತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ವಿಜಯನಗರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಧುರ ಕಂಠದಿಂದ ಕಂಪ್ಲಿಯ ಎಸ್.ಎಂ.ಪೃಥ್ವಿ ಭಾವಗೀತೆ ಹಾಡುವದರೊಂದಿಗೆ ನೆರೆದಿದ್ದ ಪ್ರೇಕ್ಷಕರ ಮನಗೆದ್ದಿದ್ದಾನೆ. ನಂತರ ಅಧಿಕಾರಿಗಳು ಭಾವಗೀತೆ ಹಾಡಿದ ಪೃಥ್ವಿಗೆ ಹಾಗೂ ಹಾರ್ಮೋನಿಯಂ ನುಡಿಸಿದ ವಿನೋದ್ ಪಾಟೀಲ್, ತಬಲವಾದಕ ಮಣಿಕಂಠ ವಿಶ್ವನಾಥ, ರಿಧಮ್ ನೀಡಿದ ಎಂ.ಶಂಕರ್ ಇವರಿಗೆ ಶಿಲ್ಡ್ ಮತ್ತು ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಎಸ್.ಎಂ.ಪವಿತ್ರಾ, ಎಸ್.ಎಂ.ಸಮರ್ಥ್ ಹಾಗೂ ಅಧಿಕಾರಿಗಳು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 