ಅಭ್ಯಾಸದ ಜೊತೆಗೆ ತಮ್ಮ ಪ್ರತಿಭೆ ಗುರುತಿಸಿಕೊಳ್ಳಬೇಕು: ಶ್ರೀಕಾಂತ ದುಂಡಿಗೌಡ್ರ

ಅಭ್ಯಾಸದ ಜೊತೆಗೆ ತಮ್ಮ ಪ್ರತಿಭೆ ಗುರುತಿಸಿಕೊಳ್ಳಬೇಕು: ಶ್ರೀಕಾಂತ ದುಂಡಿಗೌಡ್ರ Along with practice, one should recognize one's talent: Srikanth Dundigowdra

ಶಿಗ್ಗಾವಿ 29: ಅಭ್ಯಾಸದ ಜೊತೆಗೆ ತಮ್ಮಲಿರುವಂತಹ ಪ್ರತಿಭೆಯನ್ನು ಹೊರ ತರುವ ಪ್ರಯತ್ನದಲ್ಲಿರಬೇಕು ಅಂದಾಗ ಈ ಸ್ಪರ್ಧಾತ್ಮಕ ಯುಗದಲ್ಲಿ ಮತ್ತಷ್ಟು ಸಾಧಿಸಲು ಸಾದ್ಯ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತಗೌಡ ದುಂಡಿಗೌಡ್ರ ಹೇಳಿದರು.ತಾಲೂಕಿನ ಬನ್ನೂರ ಗ್ರಾಮದಲ್ಲಿ ಏರಿ​‍್ಡಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರುಹೆಚ್ಚಿನ ಅಂಕಗಳನ್ನು ಪಡೆದು ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳು ತಾವು ನಿಮಗೆ ಕಲಿಸಿದ ಗುರುಗಳು, ಶಾಲೆಯ, ಊರಿನ, ಪಾಲಕರ ಕೀರ್ತಿಯನ್ನು ಹೆಚ್ಚಿಸಿದ್ದೀರಿ ಮತ್ತು ಇನ್ನೂಳಿದ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿ ಮಾದರಿಯಾಗಿದ್ದೀರಿ ಎಂದರು.  

ಕಾರ್ಯಕ್ರಮ ಉದ್ಘಾಟನೆ ತಾಲೂಕ ಶಿಕ್ಷಣಾಧಿಕಾರಿ ಎಂ.ಬಿ ಅಂಬಿಗೇರ ನೆರವೇರಿಸಿದರು, ಪ್ರಾಸ್ತವಿಕವಾಗಿ ಬಸವರಾಜ ಮಾಯಣ್ಣವರ ಮಾತನಾಡಿದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಇಂದೂದರ ಮುತ್ತಳ್ಳಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಗಿರಿಜಮ್ಮ ದೊಡ್ಮನಿ, ವೀರಭದ್ರ​‍್ಪ ಅಗಡಿ, ಬಿ.ಶ್ರೀನಿವಾಸಎಫ್ ವಿ ಪೊಲೀಸಗೌಡ್ರ, ಅರುಣ ಹುಡೆದಗೌಡ್ರ, ದುದ್ದುಸಾಬ ಕಾಮದೋಡ,ಕಲಂದರ ದೊಡ್ಮನಿ, ಬಿ.ಆರ್‌.ಅಂಗಡಿ, ಎಮ್‌.ಬಿ.ಬ್ಯಾಡಗಿ ಸೇರಿದಂತೆ ಗ್ರಾಮದ ಹಿರಿಯರು ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು. ಪ್ರವೀಣಸಾಗರ ಸ್ವಾಗತಿಸಿದರುಪ್ರವೀಣ ಸಿದ್ದಣ್ಣವರ ನಿರೂಪಿಸಿದರು.