ರೈತನ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ವಿತರಣೆ
ಲೋಕದರ್ಶನ ವರದಿ
ಚಿಕ್ಕೋಡಿ 19: ಸಾಲ ತೀರಿಸಲಾಗದೆ ಆತ್ಮ ಹತ್ಯೆ ಮಾಡಿಕೊಂಡಿದ್ದ ರೈತನ ಪತ್ನಿಗೆ ಶಾಸಕ ಗಣೇಶ ಹುಕ್ಕೇರಿ ದಿ.18ರಂದು 5 ಲಕ್ಷ ರೂ. ಚೆಕ್ ವಿತರಿಸಿದರು.
ಇಂಗಳಿಯ ಮಹಾದೇವ ಶಿವಪ್ಪ ಅಂಬಿ (48) ಕಳೆದ ಜುಲೈ 4ರಂದು ಇಂಗಳಿ ಗ್ರಾಮದ ಮಳಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ವಯಕ್ತಿಕವಾಗಿ 5.49 ಲಕ್ಷ ರೂ. ಹಾಗೂ ಸಹೋದರ ಶಂಕರ ಶಿವಪ್ಪ ಅಂಬಿ ಜಂಟಿ ಖಾತೆಯಲ್ಲಿ 17 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಮಹಾದೇವ ಸಾಲ ತೀರಿಸಲಾಗದೆ ಅನೇಕ ದಿನಗಳಿಂದ ಚಿಂತಾಕ್ರಾಂತನಾಗಿದ್ದ.
ಮಹಾದೇವ ಹೆಸರಲ್ಲಿ ಉಗಾರ ಬುದ್ರುಕದಲ್ಲಿ 2 ಎಕರೆ ಮತ್ತು ಇಂಗಳಿಯಲ್ಲಿ ಜಂಟಿ ಖಾತೆಯಲ್ಲಿ 19 ಗುಂಟೆ ಮಾತ್ರ ಜಮೀನು ಇತ್ತು. ಪ್ರಕರಣವನ್ನು ಪರಿಶೀಲಿಸಿದ ಅಧಿಕಾರಿಗಳು ಆತನ ಆತ್ಮಹತ್ಯೆಗೆ ಸಾಲವಲ್ಲದೆ ಬೇರೆ ಯಾವುದೇ ಕರಣ ಇಲ್ಲ ಎನ್ನುವ ತೀಮರ್ಾನಕ್ಕೆ ಬಂದು 5 ಲಕ್ಷ ರೂ. ಮಂಜೂರು ಮಾಡಿದ್ದರು.
ಮೃತನ ಮನೆಗೆ ಸೋಮವಾರ ಸಂಜೆ ತೆರಳಿದ ಗಣೇಶ ಹುಕ್ಕೇರಿ, ರೈತನ ಪತ್ನಿ ಲತಾ ಮಹಾದೇವ ಅಂಬಿಗೆ 5 ಲಕ್ಷ ರೂ. ಚೆಕ್ ವಿತರಿಸಿದರು. ರೈತರು ಯಾವುದೇ ಸಂದರ್ಭದಲ್ಲಿ ಎದೆಗುಂದಬಾರದು. ಆತ್ಮಹತ್ಯೆಯಂತಹ ಕೃತ್ಯಕ್ಕೆ ಇಳಿಯಬಾರದು. ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ರೈತರ ಕಷ್ಟಗಳಿಗೆ ಸದಾಕಾಲ ಸ್ಪಂದಿಸಲು ಸಿದ್ಧ ಎಂದು ಗಣೇಶ ಹುಕ್ಕೇರಿ ಧೈರ್ಯ ತುಂಬಿದರು. ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 