ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 1,960 ಪ್ರಕರಣಗಳ ಇತ್ಯರ್ಥ

ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 1,960 ಪ್ರಕರಣಗಳ ಇತ್ಯರ್ಥ 1,960 cases settled at the National Lok Adalat

ರಾಯಬಾಗ 11 : ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು ತಮ್ಮ ತಮ್ಮ ವ್ಯಾಜ್ಯಗಳನ್ನು ಅಪಸಾತ ಮೂಲಕ ಇತ್ಯರ್ಥ ಪಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು. ಶನಿವಾರ ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಬೃಹತ್ತ ಲೋಕ ಅದಾಲತದಲ್ಲಿ ಕಕ್ಷದಾರರ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಮಾತನಾಡಿದ ಅವರು,  ನ್ಯಾಯಾಲಯಕ್ಕೆ ಬರುವ ಕಕ್ಷಿದಾರರ ತಮ್ಮ ಪ್ರಕರಣಗಳನ್ನು ಶೀಘ್ರವಾಗಿ ಬಗೆಹರಿಸಿಕೊಳ್ಳಲು ಲೋಕ ಅದಾಲತ ಹಮ್ಮಿಕೊಂಡಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.

ಇಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಬೃಹತ್ತ ಲೋಕ ಅದಾಲತನಲ್ಲಿ ಒಟ್ಟು 1960 ಪ್ರಕರಣಗಳನ್ನು ಇತ್ಯರ್ಥ ಪಡಿಸಿರುವುದಾಗಿ ತಿಳಿಸಿದರು. ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ, 1ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ನಿವೇದಿತಾ ಬನ್ನಾಳ, 2ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಸುಖೇಂದ್ರ ಪಿ.ಎಮ್, ವಕೀಲರಾದ ಆರ್‌.ಎಸ್‌.ಶಿರಗಾಂವೆ, ವಿ.ಎಸ್‌.ಪೂಜೇರಿ, ಎಸ್‌.ಕೆ.ರೆಂಟೆ, ಜಿ.ಎಸ್‌.ಪವಾರ, ಎಲ್‌.ಎಚ್‌.ನಾಗರಮುನ್ನೋಳ್ಳಿ, ಡಿ.ಎಚ್‌.ಯಲ್ಲಟ್ಟಿ, ಸುಧಾ ತರಾಳ, ಲಕ್ಷ್ಮೀ ಹಂಜಿ ಹಾಗೂ ವಕೀಲರು, ನ್ಯಾಯಾಲಯದ ಸಿಬ್ಬಂದಿ ಮತ್ತು ಕಕ್ಷಿದಾರರು ಇದ್ದರು.