ಅದ್ಧೂರಿಯಾಗಿ ನೆರವೇರಿದ ವಾಸವಿ ಮಾತರವರ ಆತ್ಮಾರೆ್ಣಯ ಕಾರ್ಯಕ್ರಮ
ಕೊಟ್ಟೂರು 03: ಕೊಟ್ಟೂರು ನಗರದಲ್ಲಿರುವ ವಾಸವಿ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಇತ್ತೀಚೆಗೆ ವಾಸವಿ ಮಾತರವರ ವಿಶ್ವರೂಪ ದರ್ಶನ ಮತ್ತು ಆತ್ಮಾರೆ್ಣಯ ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಕಳಸ ಪೂಜೆ ವಾಸವಿ ಮಾತ ಕುರಿತು ಭಜನೆಗಳು, ವಾಸವಿಹೋಮ, ಪೂರ್ಣಾಹುತಿ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು, ನಂತರ ಕೊನೆಯಲ್ಲಿ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷರು, ಪಧಾಧಿಕಾರಿಗಳು, ಸಮಾಜದ ಹಿರಿಯ ಅರ್ಯವೈಶ್ಯ ಮಂಡಳಿಯವರು ಯುವ ಅರ್ಯವೈಶ್ಯ ಮಂಡಳಿಯ ಸದಸ್ಯರು ಪಧಾಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಸ್ವಿಗೊಳಿಸಿದರು. ಮಹಾಮಂಗಳಾರತಿ ನಂತರ ಪ್ರಸಾದದ ವ್ಯವಸ್ಥೆಯನ್ನು ಸಹ ಹಮ್ಮಿಕೊಳ್ಳಲಾಗಿತ್ತು.