ದುಂಡಿಗೌಡ್ರ ಜನ್ಮ ದಿನದ ನಿಮಿತ್ಯ ಪ್ರತಿಭಾ ಪುರಸ್ಕಾರ

ದುಂಡಿಗೌಡ್ರ ಜನ್ಮ ದಿನದ ನಿಮಿತ್ಯ ಪ್ರತಿಭಾ ಪುರಸ್ಕಾರ Talent Award on the occasion of Dundigowdra's birth anniversary


ಶಿಗ್ಗಾವಿ 02  : ಬಂಕಾಪುರ ಪಟ್ಟಣದ ಲಯನ್ಸ್‌ ನವ ಭಾರತ ವಿಧ್ಯಾ ಸಂಸ್ಥೆ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 2024-2025 ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶ್ರೀ ಶ್ರೀಕಾಂತ ದುಂಡಿಗೌಡ್ರ ಅಭಿಮಾನಿ ಬಳಗದ ವತಿಯಿಂದ ಹಾಗೂ ಭಾರತ ಸೇವಾ ಸಂಸ್ಥೆಯ ಸರ್ವ ಸದಸ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಾ.ಕೆ.ಎಮ್‌. ಬೊಮ್ಮನಹಳ್ಳಿ,ಜಿ.ಐ.ಸಜ್ಜನಗೌಡ್ರ, ಎಸ್‌.ಬಿ.ಅಡ್ವಾಣಿಮಠ, ಜಿ.ಎಸ್‌.ಮಾಮ್ಲೆಪಟ್ಟಣಶೆಟ್ಟರ,ವೆಂಕಟೇಶ ಮೇಲಗಿರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಜಿ.ಎಸ್‌.ದೇಸಾಯಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಪಾಲಕರು ಸೇರಿದಂತೆ ಅಭಿಮಾನಿಗಳು ಉಪಸ್ಥಿತರಿದ್ದರು.