ಕಬ್ಬುಸಾಗಿಸುವ ಟ್ರ್ಯಾಕ್ಟರ್ಗಳ ಬೇಕಾಬಿಟ್ಟಿ ಸಂಚಾರ: ಹೆಚ್ಚುತ್ತಿರುವ ಅಪಘಾತಗಳು
Sugarcane tractors' roof-mounted traffic: Increasing accidents
ಮಾಂಜರಿ : ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮು ಆರಂಭಿಸಿವೆ. ಕಬ್ಬುಸಾಗಿಸುವ ಟ್ರ್ಯಾಕ್ಟರ್ಗಳು ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿರುವುದರಿಂದ ಅಪಘಾತಗಳು ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಇದಕ್ಕೆ ಕಡಿವಾಣ ಹಾಕಬೇಕಿದ್ದ ಪೊಲೀಸರು ಹಾಗೂ ಆರ್ಟಿಒ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿರುವುದು ಸಮಸ್ಯೆ ಬಿಗಡಾಯಿಸಿದೆ.
ಅಥಣಿ, ಕಾಗವಾಡ ಎರಡು ತಾಲೂಕು ಸೇರಿ 6 ಚಿಕ್ಕೋಡಿ ತಾಲೂಕಿನ ಎರಡು ನಿಪ್ಪಣಿ ತಾಲೂಕಿನ ಎರಡು ರಾಯಬಾಗ್ ತಾಲೂಕಿನಲ್ಲಿ ಮೂರು ಸಕ್ಕರೆ ಕಾರ್ಖಾನೆಗಳಿವೆ. ಪ್ರತಿಯೊಂದು ಕಾರ್ಖಾನೆಗೆ ಪ್ರತಿನಿತ್ಯ 500ಕ್ಕೂ ಅಧಿಕ ಟ್ರ್ಯಾಕ್ಟರ್ಗಳು ಕಬ್ಬು ಸಾಗಿಸುತ್ತವೆ. ನಿತ್ಯ 6 ಸಕ್ಕರೆ ಕಾರ್ಖಾನೆ ಸೇರಿ 3000 ಕ್ಕೂ ಅಧಿಕ ಟ್ರ್ಯಾಕ್ಟರ್ಗಳು ಸಂಚಾರ ನಡೆಸುತ್ತವೆ. ಇದರ ಹೊರತಾಗಿ ನೆರೆಯ ಮಹಾರಾಷ್ಟ್ರ ಮತ್ತು ಬಾಗಲಕೋಟೆ ಜಿಲ್ಲೆಗಳ ಕಾರ್ಖಾನೆಗಳಿಗೂ ತಾಲೂಕಿನಿ ಂದ ಕಬ್ಬು ಸಾಗಿಸುವುದರಿಂದ ಸರಾಸರಿ 4000 -5000 ಸಾವಿರ ಟ್ರ್ಯಾಕ್ಟರ್ಗಳು ಸಂಚಾರ ಇವೆ.
ನಿಯಮ ಏನು ಹೇಳುತ್ತದೆ ?: ಕಾರ್ಖಾನೆಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್ಗಳು ಯಾವ ಕಾರ್ಖಾನೆಗೆ ವ್ಯಾಪ್ತಿಗೆ ಒಳಪಟ್ಟಿದೆ. ಅದರ ಹೆಸರು ಸಹಿತ ಕೆಂಪು ಬಣ್ಣದ ಬಟ್ಟೆ ಹಾಕಿರಬೇಕು. ಹಿಂದೆ ಹಾಗು ಎರಡೂ ಬದಿಗೆ ಕೆಂಪು ರೇಡಿಯಂ ಹಾಕಿಸಿರಬೇಕು. (ರಾತ್ರಿ ಸಂಚರಿಸುವಾಗ ಹಿಂದೆ ಬರುವ ವಾಹನಗಳಿಗೆ ಕಾಣಿಸುವುದಕ್ಕೆ), ಟೇಪ್ ರೆಕಾರ್ಡರ್ ಹಚ್ಚಿ ವಾಹನ ಚಲಾಹಿಸಬಾರದು. ವೇಗದ ಮಿತಿ ಇರಬೇಕು. ಒಂದು ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಕನಿಷ್ಠ 11 ಟನ್, ಗರಿಷ್ಠ 16 ಟನ್ ಮಾತ್ರ ಕಬ್ಬ ಸಾಗಿಸಬೇಕು.
ಕಾನೂನು ಲೆಕ್ಕಕ್ಕಿಲ್ಲ, ಅಪಘಾತಗಳಿಗೆ ತಡೆಯಿಲ್ಲ: ಆದರೆ, ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಚಾಲಕರು ಎಲ್ಲ ಕಾನೂನು ಗಾಳಿ ತೂರುತ್ತಿದ್ದಾರೆ. ಒಂದೇ ಎಂಜಿನ್ಗೆ ಎರಡು ಟ್ಯಾಲಿಗಳನ್ನು ಜೋಡಿಸಿ 40 ಟನ್ವರೆಗೆ ಕಬ್ಬು ಸಾಗಿಸಲಾಗುತ್ತದೆ. ಯಾವುದೇ ಟ್ರ್ಯಾಕ್ಟರ್ಗೆ ಕೆಂಪು ಬಣ್ಣದ ಬಟ್ಟೆ, ರೇಡಿಯಂ ಇರುವುದೇ ಇರಲ್ಲ. ಬಹುತೇಕ ಎಲ್ಲ ಟ್ರ್ಯಾಕ್ಟರ್ಚಾಲಕರು ಟೇಪ್ ರೆಕಾರ್ಡರ್ ಹಚ್ಚಿಕೊಂಡೇ ಸಾಗುತ್ತಾರೆ. ಹಂಗಾ ಮಿನಲ್ಲಿ ಕಾರ್ಖಾನೆಗೆ ಕಬ್ಬು ಸಾಗಿಸುವ ಮಾರ್ಗದಲ್ಲಿ ಇತರೇ ವಾಹನಗಳು ಸಾಗುವುದು ತೀವ್ರಕಷ್ಟದಾಯವಾಗಿದೆ. ಟ್ರ್ಯಾಲಿಗೆ ಹೊರಬರುವಂತೆ ಕಬ್ಬು ಹೇರಿರುವುದರಿಂದ ಅವುಗಳನ್ನು ಓವರ್ ಟೇಕ್ ಮಾಡುವುದು ದುಸ್ಸಾಹಸವಾಗಿಬಿಟ್ಟಿದೆ.
ಅಲ್ಲದೆ ಎರಡು ಟ್ರ್ಯಾಲಿಗಳಿದ್ದು, ಟೇಪ್ ರೆಕಾರ್ಡರ್ ಹಚ್ಚುವುದರಿಂದ ಹಿಂದೆ ಬರುವ ವಾಹನ ಸವಾರರು ಎಷ್ಟೇ ಹಾರ್ನ್ ಹಾಕಿದರೂ ಕೇಳಿಸದೇ ತಮ್ಮ ಪಾಡಿಗೆ ತಾವು ಚಲಾಯಿಸುತ್ತಾರೆ. ರಾತ್ರಿ ಸಮಯದಲ್ಲೇ ಈ ಟ್ರ್ಯಾಕ್ಟರ್ಗಳು ಹೆಚ್ಚಾಗಿ ಸಂಚರಿಸುವುದರಿಂದ ಹಿಂದಿನ ವಾಹನಗಳಿಗೆ ಎದುರು ಟ್ರ್ಯಾಕ್ಟರ್ ಹೊರಟಿರುವುದು ಗಮನಕ್ಕೆಬಾರದೇ ಅನೇಕ ಅಪಘಾತಗಳು ಸಂಭವಿಸಿವೆ. ಹಾರ್ನ್ ಹಾಕಿದರೆ ಸೈಡ್ ತೆಗೆದುಕೊಳ್ಳದಿದ್ದಾಗ ಓವರ್ಟೇಕ್ ಮಾಡಲು ಯತ್ನಿಸಿ ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿಯಾಗಿ ಅಪಘಾತ ಪ್ರಕರಣ ಹೆಚ್ಚುತ್ತಿವೆ.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿ ಪ್ರಮುಖ ರಸ್ತೆಗಳಲ್ಲಿ ಊಟ ಮಾಡಲು ರಸ್ತೆ ಬದಿಗೆ ಲೋಡ್ ಹೊಂದಿರುವ ಟ್ಯಾಕ್ಟರ್ ನಿಲ್ಲಿಸುವುದರಿಂದ ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುವ ಲಾರಿ, ಕಾರು, ದ್ವಿಚಕ್ರವಾಹನ ಸವಾರರು ಮುಂದೆ ಟ್ಯಾಕ್ಟರ್ ನಿಂತಿರುವುದು ಗಮನಕ್ಕೆ ಬಾರದೇ ಹಿಂಬದಿಯಿಂದ ಡಿಕ್ಕಿಹೊಡೆದು ಅಪಘಾತ ಸಂಭವಿಸುವ ಪ್ರಕಣಗಳ ಸಂಖ್ಯೆಯೂ ಅಧಿಕವಾಗಿದೆ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುವ ಕಬ್ಬು ಸಾಗಿಸುವ ಟ್ರ್ಯಾಕ್ಟರ್ಗಳಿಂದ ವರ್ಷದಿಂದ ವರ್ಷಕ್ಕೆ ರಸ್ತೆಗಳ ಅಪಘಾತಗಳ ಸಂಖ್ಯೆ, ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಇಷ್ಟಾದರೂ ಪೊಲೀಸರಲಾಗಲಿ, ಆರ್.ಟಿ.ಒ ಅಧಿಕಾರಿಗಳಾಗಲಿ ಜಾಣಮೌನ ವಹಿಸುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ.
ಸಭೆಯನ್ನೇ ನಡೆಸಿಲ್ಲ; ಆರ್ಟಿಒ ಅಧಿಕಾರಿಗಳು ಹಾಗೂ ಪೊಲೀಸರು ಪ್ರತಿವರ್ಷ ಕಬ್ಬು ಹಂಗಾಮು ಆರಂಭಕ್ಕೂ ಮುನ್ನ ಕಾರ್ಖಾನೆ ಆಡಳಿತ ಮಂಡಳಿ, ಟ್ರ್ಯಾಕ್ಟರ್ ಮಾಲೀಕರ ಸಭೆ ನಡೆಸಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಕಡ್ಡಾಯ ಆದೇಶ ಇದ್ದರೂ ಇಂತಹಯಾವುದೇಸಭೆಗಳು ನಡೆಯುತ್ತಿಲ್ಲ. ಕಾರ್ಖಾನೆಗಳಿಗೆ ಪ್ರಭಾವಿ ರಾಜಕೀಯ ಮುಖಂ ಡರು ಅಧ್ಯಕ್ಷರಾಗಿರುವ ಕಾರಣ ಅಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಯಾರದೋಒತ್ತಡಕ್ಕೆ ಜನಸಾಮಾನ್ಯರ ಜೀವದ ಜೊತೆಗೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 