ಶಿರಹಟ್ಟಿ: ಅಂತೂ ಬಂತು ನಮ್ಮ ಶಾಲೆಗೆ ಸುಣ್ಣ ಬಣ್ಣ ಕಾಣುವ ಅದೃಷ್ಟ
ಶಶಿಧರ ಶಿರಸಂಗಿ
ಶಿರಹಟ್ಟಿ 08: ಪಟ್ಟಣದ ಮ್ಯಾಗೇರಿಯ ಕನ್ನಡ ಪ್ರಾಥಮಿಕ ಶಾಲೆಯ ಕೊಠಡಿಗಳಿಗೆ ಸಿಮಿಂಟ್ ಮೇಲ್ಛಾವಣಿ ಹಾಕುವ ವೇಳೆ ತಮ್ಮ ಅಂದವನ್ನು ಕಳೆದುಕೊಂಡ ಕೊಠಡಿಗಳ ಗೋಡೆಗಳನ್ನು ಸ್ವಚ್ಚಗೊಳಿಸಿ ಮಕ್ಕಳ ಕಲಿಕೆಗೆ ಅನುವು ಮಾಡಿಕೊಡಲು ಪಿ.ಡಬ್ಲೂ.ಡಿ ಸಹಾಯಕ ಇಂಜೀನಿಯರ ರಾಜಕುಮಾರ ಗುತ್ತಿಗೆದಾರರಿಗೆ ಸೂಚಿಸಿದರು.
ಮೇ. 31ಶನಿವಾರ ಲೋಕದರ್ಶನದ ಗದಗ ವಿಭಾಗದಲ್ಲಿ ಪ್ರಕಟಗೊಂಡ "ನೋಡ ಬನ್ನಿ ಸುಣ್ಣ ಬಣ್ಣವನ್ನೇ ಕಾಣದ ನಮ್ಮ ಸಕರ್ಾರಿ ಶಾಲೆಯನ್ನು" ವರದಿಯನ್ನು ನೋಡಿದ ಸ್ಥಳೀಯ ಮುಖಂಡರುಗಳು ಹಾಗೂ ಈ ವರದಿಯನ್ನು ನೋಡಿ ಎಚ್ಚತ್ತುಗೊಂಡ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಶಾಲೆಯ ಸ್ಥಿತಿಯನ್ನು ನೋಡಿ ಗುತ್ತಿಗೆದಾರರನ್ನು ಕರೆಯಿಸಿ ಸ್ವಚ್ಚಗೊಳಿಸಲು ಸೂಚಿಸಿದರು. ಅಲ್ಲದೆ ಮುಂದಿನ ಅನುದಾನದಲ್ಲಿ ಶಾಲೆಗೆ ಸುಣ್ಣ-ಬಣ್ಣದ ವ್ಯವಸ್ತೆ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತಮ ಪರಿಸರ ನಿಮರ್ಿಸಿಕೊಡಲಾಗುವದು ಎಂದು ಹೇಳಿದರು.
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ವಿ.ವಿ.ಕಪ್ಪತ್ತನವರ, ಪಪಂ ಸದಸ್ಯರಾದ ಸಂದೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ, ಶ್ರೀನಿವಾಸ ಬಾರಬರ್, ಈರಣ್ಣ ಕೋಟಿ, ಎಚ್,ಎಮ್.ದೇವಗಿರಿ, ಸುಧೀರ ಜಮಖಂಡಿ ಹಾಗೂ ಓಣಿಯ ಪ್ರಮುಖರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 