ಯರಗಟ್ಟಿಗೆ ಆಗಮಿಸಿದ ಸಂಗೊಳ್ಳಿ ರಾಯಣ್ಣನ ಜ್ಯೋತಿ
Sangolli Rayanna's Jyoti arrives at Yaragati
ಯರಗಟ್ಟಿ 10: ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ 12-13 ರಂದು ನಡೆಯಲಿರುವ ವೀರಯೋಧ ಹುತಾತ್ಮ ಸಂಗೊಳ್ಳಿ ರಾಯಣ್ಣನ ಉತ್ಸವಕ್ಕೆ ಜಿಲ್ಲೆಯ ಜನಸ್ತೋಮವನ್ನು ಆಹ್ವಾನಿಸಲು ಮತ್ತು ಜನರಲ್ಲಿ ರಾಯಣ್ಣನ ಬಗ್ಗೆ ಅರಿವು ಮೂಡಿಸುವ ಸಂಬಂಧದಲ್ಲಿ ಸಂಗೊಳ್ಳಿ ರಾಯಣ್ಣನ ಜ್ಯೋತಿ ಯರಗಟ್ಟಿಗೆ ಆಗಮಿಸಿತು.
ಪಟ್ಟಣದ ಸಂಗೋಳ್ಳಿ ರಾಯಣ್ಣ ವತ್ತದ ಬಳಿ ಆಗಮಿಸಿದ ಜ್ಯೋತಿಯನ್ನು ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಕುರುಬರ ಸಂಘದ ಉಪಸ್ಥಿತಿಯಲ್ಲಿ ಜ್ಯೋತಿಯನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಮಾತನಾಡಿ, ಸಂಗೊಳ್ಳಿ ರಾಯಣ್ಣ ಒಬ್ಬ ವೀರಯೋಧನಾಗಿದ್ದಲ್ಲದೆ ಹಾನ ದೇಶ ಭಕ್ತನಾಗಿ ಕಿತ್ತೂರಿನ ಅಳಿವು ಉಳಿವಿಗಾಗಿ ಸದಾ ಸನ್ನದನಾಗಿರುತಿದ್ದ ಅವನ ದೇಶ ಪ್ರೇಮವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳಿವಡಿಸಿಕೊಳ್ಳುವಂತೆ ತಿಳಿಸಿದರು.ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮತ್ತು ಸುಮಂಗಲೆಯರ ಆರತಿಯೊಂದಿಗೆ ಸಂಚರಸಿ ರಾಯಬಾಗ ತಾಲೂಕಿಗೆ ಪ್ರಯಾಣ ಬೆಳೆಸಿತು.
ಈ ವೇಳೆ ಪ.ಪಂ ಹನಮಂತ ಹಾರೂಗೊಪ್ಪ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ವಿಠ್ಠಲಗೌಡ ದೇವರಡ್ಡಿ, ಪ್ರಕಾಶ ವಾಲಿ, ಸಿದ್ದಾರೂಡ ರೇಬ್ಬನ್ನವರ, ಮುದುಕಪ್ಪ ತಡಸಲೂರ, ಮಹಾದೇವ ಮುರಗೋಡ, ಆರ್. ಕೆ. ಪಟಾತ, ಬಸವರಾಜ ದಿಡಗನ್ನವರ, ಈರಣ್ಣಾ ಕಿಲಾರಿ, ಪ್ರಕಾಶ ಸೂಣದೋಳಿ, ಲಕ್ಕಪ್ಪ ಸನ್ನಿಂಗವನ್ನರ, ವಿಠ್ಠಲ ಹಾರೂಗೋಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 