ಸಾಯಿ ಸಂಸ್ಥೆಯ ಸಮಾಜ ಮುಖಿ ಸೇವೆ ಶ್ಲಾಘನೀಯ: ಶಂಕರ ಕಲ್ಲೋಳಿಕರ

Sai organization's social service is commendable: Sankara Kallolikar

ಸಾಯಿ ಸಂಸ್ಥೆಯ ಸಮಾಜ ಮುಖಿ ಸೇವೆ ಶ್ಲಾಘನೀಯ: ಶಂಕರ ಕಲ್ಲೋಳಿಕರ    

ಧಾರವಾಡ 30: ಶ್ರೀ ಸಾಯಿ ಸಂಸ್ಥೆಯು ಶಿಕ್ಷಣ ಸಂಸ್ಥೆಯು ಸತತ 8 ವರ್ಷಗಳಿಂದ ಹಲವಾರು ಕ್ಷೇತ್ರಗಳಲ್ಲಿ ಸೇವೆಯಲ್ಲಿ ನಿರತರಾಗಿರುವುದು ಹೆಮ್ಮೆಯ ವಿಷಯ,  ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಮಕ್ಕಳ ವೈಯಕ್ತಿಕ ಕಾಳಜಿ ಈ ಸಂಸ್ಥೆಯ ಕನಸು ಅದರಂತೆ ಈಗಿನ ಕಾಲದಲ್ಲಿ ಶಿಕ್ಷಣವು ವ್ಯವಹಾರ ಆಗಿರುವುದು ದುರದಷ್ಟಕರ ವಿಷಯ ಅದರಲ್ಲಿ ಈ ಸಂಸ್ಥೆಯು ಮಕ್ಕಳಿಗಾಗಿ ಇಂತಹ ಅಚ್ಚುಮೆಚ್ಚಿನ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕರ್ನಾಟಕ ಅರಣ್ಯ ಇಲಾಖೆ ನಿವೃತ್ತ ಉಪ ಅರಣ್ಯ ಸಂಕ್ಷಣಾಧಿಕಾರಿ ಶಂಕರ ಕೆ ಕಲ್ಲೋಳಿಕರ ಹೇಳಿದರು. 

ಅವರು ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ 2024-25 ನೇ ಸಾಲಿನ ಜ್ಞಾನ ಸಿರಿ 08 ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು. 

ಈಗಿನ ಕಾಲದ ಮಕ್ಕಳು ಮೊಬೈಲ್ ಮೊರೆ ಹೋಗಿದ್ದು ದುರದೃಷ್ಟಕರ ವಿಷಯ ವಿದ್ಯಾರ್ಥಿಗಳ ಜೀವನ ಶೈಲಿ, ಆಹಾರ ಪದ್ಧತಿ ಇವೆಲ್ಲವೂ ನಮ್ಮ ಜೀವನ ಶೈಲಿಯನ್ನು ಹಾಳುಮಾಡುತ್ತದೆ. ಈ ಸಂಸ್ಥೆಯು ಇನ್ನು ಹತ್ತು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಶುಭ ಹಾರೈಸುತ್ತೇನೆ  ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನನ್ನ ಸೌಭಾಗ್ಯ ಎಂದು ನುಡಿದರು.  

ಮುಖ್ಯ ಅತಿಥಿಗಳ ನುಡಿಗಳನ್ನಾಡಿದ ಕಾರ್ಯದರ್ಶಿಗಳು ಬನಶಂಕರಿ ಎಜ್ಯುಕೇಶನ್ ಸೊಸೈಟಿ ಸುಜಾತ ಎಸ್ ಶೇಗುಣಸಿ ರವರು ನಾನು ಗ್ರಾಮೀಣ ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆದು ಈಗ ವಿದ್ಯಾ ಸಂಸ್ಥೆ ಹೆಮ್ಮರವಾಗಿ ಬೆಳೆದಿರುವುದು ಅದು ನನ್ನ ಹೆಮ್ಮೆಯ ವಿಷಯ ನನ್ನ ಒಂದು ಆಶಯ ಗ್ರಾಮೀಣ ವಿದ್ಯಾರ್ಥಿಗಳ ಮುಂದೆ ಬಂದು ನಮ್ಮ ತರಹ ತಾವುಗಳು ಕೂಡ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಗಲಿ ಎಂದು ಶುಭ ಹಾರೈಸುತ್ತೇನೆ, ಕಲಿಸುವ ಪಾಠ ಕಲಿತ ವಿದ್ಯೆ ಯಾವತ್ತೂ ಕೈ ಬಿಡಲ್ಲ ಅದೇ ರೀತಿ ವಿದ್ಯಾರ್ಥಿಗಳಿಗೆ ಎಂದಿಗೂ ಸೋಲಬೇಡಿ ಎಂದಿಗೂ ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಈ ಕಿವಿ ಮಾತು ಹೇಳಿದರು.  

ಮುಖ್ಯೋಪಾಧ್ಯಾಯ ಶಾರದಾ ಪ್ರಾಥಮಿಕ ಹಾಗೂ ಪ್ರೌಢಶಾಲೆ ವೀರೇಶ್ ಆರ್ ಶಿರುಂದಮಠ ಅವರು ಮಾಡಿ ಮಾತನಾಡಿದ ಈ ಸಂಸ್ಥೆಯು ಹಲವಾರು ವರ್ಷಗಳಿಂದ ನಮ್ಮ ಶಾಲೆಯ ವಿಗಳಿಗೆ ಹಾಗೂ ಇನ್ನೂ ಅನೇಕ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸುವುದು ಹೆಮ್ಮೆ ಸಂಗತಿ, ಈ ಸಂಸ್ಥೆಯಲ್ಲಿ ನನಗೆ ಕಂಡು ಬಂದ ಹೆಮ್ಮೆಯ ಸಂಗತಿ ಎಂದರೆ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕೃತಿ ಒಳ್ಳೆಯ ನಡತೆ  ಕಂಡು  ಬಂದಿದ್ದು ಸಂತೋಷದ ಸಂಗತಿ ಈ ಸಂಸ್ಥೆಯು ಇದೇ ತರಹ ವಿದ್ಯಾರ್ಥಿಗಳಿಗೋಸ್ಕರ ಇನ್ನು ಹೆಚ್ಚು ಹೆಚ್ಚು ಒಳ್ಳೆ ಕಾರ್ಯಕ್ರಮವನ್ನು ಆಯೋಜಿಸಿ ಎಂದು ಶುಭ ಹಾರೈಸುತ್ತೇನೆ,  

ಸಂಸ್ಥೆಯ ಅಧ್ಯಕ್ಷ ಡಾ. ವೀಣಾ ಬಿರಾದಾರ, ಕಾರ್ಯಕ್ರಮ ಉದ್ದೇಶಿಸಿ ವಿದ್ಯಾರ್ಥಿಗಳಿಗೆ ನಾನು ಕಾಲೇಜ ಪ್ರಾರಂಭಿಸುವ ಉದ್ದೇಶ ಮತ್ತು ಕನಸು ವಿದ್ಯಾರ್ಥಿಗಳ ಜೀವನ ರೂಪಿಸುವುದು, ವಿದ್ಯರ್ಥಿಗಳ ಸಮೃದ್ಧಿಗಾಗಿ ಶ್ರಮಿಸುವುದು ಹಾಗೂ ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿಸುವ ನಿಟ್ಟಿನಲ್ಲಿ, ಮಹಾವಿದ್ಯಾಲಯವು ಹಗಲಿರುಳು ಶ್ರಮಿಸುತ್ತಿದೆ. ಮಹಾವಿದ್ಯಾಲಯದ ಉತ್ತಮ ಗುಣಮಟ್ಟದ ಹಾಗೂ ಸಂಸ್ಕಾರಯುತವಾದ ಶಿಕ್ಷಣವನ್ನು ಕೊಡುವುದಾಗಿದೆ ಎಂದು ನುಡಿದರು. ಅದರಂತೆ ದೇಶವನ್ನು ಮುನ್ನಡಸಲು ಉತ್ತಮ ಪ್ರಜೆಗಳು ಅಗತ್ಯ, ಉತ್ತಮ ಪ್ರಜೆಗಳು ದೊರಯ ಬೇಕಿದ್ದರೆ ಅವರಿಗೆ ಉತ್ತಮ ಶಿಕ್ಷಣ ಅಗತ್ಯ, ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.  

ಶಿಕ್ಷಣ ಕೇತ್ರದಲ್ಲಿ ಗಣನಿಯ ಸೇವೆ ಸಲ್ಲಿಸಿದಕ್ಕಾಗಿ ಸುಜಾತಾ ಎಸ್ ಶೇಗುಣಸಿ ಹಾಗೂ ವೀರೇಶ ಆರ್ ಶಿರುಂದಮಠ ಅವರಿಗೆ ನಮ್ಮ ಸಂಸ್ಥೆಯ ವತಿಯಿಂದ ಸಾಯಿ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದೇ ರೀತಿ ನಮ್ಮ ಮಹಾವಿದ್ಯಾಲಯದ ವಿದ್ಯಾಥಿಗಳಿಗೆ ಕ್ರೀಡಾಕೋಟದಲ್ಲಿ ಹಾಗೂ ವಿವಿದ ಸಾಂಸ್ಕೃತಿಕ ಕಾರ್ಯಕ್ರಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.  


ಪ್ರಾಸ್ತಾವಿಕ ನುಡಿಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ನಾಗರಾಜ ಶಿರೂರ ರವರು ಮಹಾವಿದ್ಯಾಲಯ ಬೆಳೆದು ಬಂದ ದಾರಿ ಬಗ್ಗೆ ವಿವರಿಸಿದರು ಸ್ವಾಗತ ಭಾಷಣವನ್ನು ಬಾಪು ಮೊರಂಕರ ರವರು, ಅತಿಥಿ ಪರಿಚಯವನ್ನು ಮೌನೇಶ ಬಡಿಗೇರ ರವರು, ವಂದನಾರೆ​‍್ಣಯನ್ನು ಸಾವಕ್ಕಾ ಅವರು ನೆರವೇರಿಸಿದರು.  

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ಎಸ್‌.ಬಿ. ಗಾಡಿ, ಪ್ರೋ ಎಸ್ ವ್ಹಿ ಗುರುಮಠ, ಅನ್ನಪೂರ್ಣಾ ಎಸ್ ಗುರುಮಠ, ಪ್ರಾಚಾರ್ಯ ನಾಗರಾಜ ಶಿರೂರ ರವರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು, ಪಾಲಕರು  ಈ ಹಾಜರಿದ್ದರು.