ಸಕ್ಕರೆ ಕಾರಖಾನೆ ಸಿಬ್ಬಂದಿ, ಕರ್ನಾಟಕ ರಾಜ್ಯ ರೈತ ಸಂಘದವರಿಗೆ ಸತ್ಕಾರ

ಸಕ್ಕರೆ ಕಾರಖಾನೆ ಸಿಬ್ಬಂದಿ, ಕರ್ನಾಟಕ ರಾಜ್ಯ ರೈತ ಸಂಘದವರಿಗೆ ಸತ್ಕಾರ Reception for sugar factory staff, Karnataka State Farmers' Association

ಸಕ್ಕರೆ ಕಾರಖಾನೆ ಸಿಬ್ಬಂದಿ, ಕರ್ನಾಟಕ ರಾಜ್ಯ ರೈತ ಸಂಘದವರಿಗೆ ಸತ್ಕಾರ

ರಾಯಬಾಗ 24: ಮಹಾರಾಷ್ಟ್ರ ರಾಜ್ಯದ ಕಾಗಲದ ಲೋಕನಾಥ ಸಿದ್ದೇಶ್ವರ ಮಾಡಲಿಕ ಸಕ್ಕರೆ ಕಾರ್ಖಾನೆಯವರು ಕಬ್ಬಿಗೆ ಮುಂಗಡ ಹಣ ರೂ.3410 ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಅಲ್ಲಿನ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳನ್ನು ಪಟ್ಟಣದಲ್ಲಿ ಸತ್ಕರಿಸಿ, ರಾಜ್ಯದ ಸಕ್ಕರೆ ಕಾರ್ಖಾನೆಯವರು ಕೂಡ ಕೂಡಲೇ ಕಬ್ಬಿಗೆ ಬೆಂಬಲ ಬೆಲೆ ಘೋಷಿಸಿ, ಕಬ್ಬು ನುರಿಸುವುದನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.ರೈತ ಸಂಘದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಮಲ್ಲಪ್ಪಾ ಅಂಗಡಿ, ಸಕ್ಕರೆ ಕಾರ್ಖಾನೆ ಚಿಫ್ ಅಗ್ರಿಕಲ್ಚರ ಅಧಿಕಾರಿ ಪ್ರತಾಪರಾವ ಮಾರಬಲ, ಪ್ರವೀಣ ಪಾಟೀಲ, ವಿಜಯ ಪಾಟೀಲ, ಬಾಬುಗೌಡಾ ಪಾಟೀಲ, ಕಾಶಪ್ಪ ಜಂಬಗಿ, ನಿಂಗಪ್ಪಾ ಪಕಾಂಡಿ , ಲಕ್ಕಪ್ಪ ಖನದಾಳೆ, ಕಲ್ಲನ್ನಗೌಡ ಪಾಟೀಲ, ಅಜಿತ ಜಾಧವ, ಸುನೀಲ ಪುಜೇರಿ, ಚಿದಾನಂದ ದೇಸಾಯಿ,, ರಾಮಗೌಡ ಪಾಟೀಲ, ತಮ್ಮಣ್ಣ ಪಾಟೀಲ, ಬಸಪ್ಪ ನಾಗನೂರ, ಭರಮು ಚಿಮ್ಮುಡ, ರಾಜು ಲಠ್ಠೆ ಸೇರಿ ಅನೇಕರು ಇದ್ದರು.