ಆರ್ಎಂಆರ್ ಕ್ರೀಡಾ ಅಕಾಡೆಮಿಯ ಬ್ಯಾಡ್ಮಿಂಟನ್ ಓಪನ್ ರೇಸ್ ಟೂರ್ನಮೆಂಟ್ ಉದ್ಘಾಟಿಸಿದ ರಾಕೇಶ ವಾದವಾ
Rakesh Wadhwa inaugurated the RMR Sports Academy's Badminton Open Race Tournament
ಆರ್ಎಂಆರ್ ಕ್ರೀಡಾ ಅಕಾಡೆಮಿಯ ಬ್ಯಾಡ್ಮಿಂಟನ್ ಓಪನ್ ರೇಸ್ ಟೂರ್ನಮೆಂಟ್ ಉದ್ಘಾಟಿಸಿದ ರಾಕೇಶ ವಾದವಾ
ಬೆಳಗಾವಿ, 02 : ಆರ್ಎಂಆರ್ (ಖಒಖ) ಸ್ಪೋರ್ಟ್ಸ್ ಅಕಾಡೆಮಿಯೂ ಒಂದೇ ಸೂರಿನಡಿಯಲ್ಲಿ ವಿವಿಧ ಕ್ರೀಡಾ ತರಬೇತಿಯ ಆರಂಭಿಸಿರುವುದು ಸಂತಸವಾಗಿದೆ. ಮಕ್ಕಳು ಈ ಅಕಾಡೆಮಿಯಲ್ಲಿ ತರಬೇತಿ ಪಡೆದು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ದೇಹದಾರ್ಢ್ಯ ಮಿಸ್ಟರ್ ವರ್ಲ್ಡ್ ರಾಕೇಶ ವಾದವಾ ಅವರು ಹೇಳಿದರು.
ನಗರದ ಆರ್ಪಿಡಿ ವೃತ್ತದ ಬಳಿಯ ಸರಾಪ್ ಕಾಲೋನಿಯಲ್ಲಿನ ಕ್ರೀಡಾ ತರಬೇತಿ ಕೇಂದ್ರವಾದ ?ಆರ್ಎಂಆರ್ (ಖಒಖ ) ಸ್ಪೋರ್ಟ್ಸ್ ಅಕಾಡೆಮಿ' ಯಿಂದ ಹಾಗೂ ಅಮೊದ್ರಾಜ್ ಸ್ಪೋರ್ಟ್ಸ್ ಸಹಯೋಗದಲ್ಲಿ ನಡೆದ ಬ್ಯಾಡ್ಮಿಂಟನ್ ಓಪನ್ ರೇಸ್ ಟೂರ್ನಮೆಂಟ್ ಪಂದ್ಯಾವಳಿಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಕಹಿಯುವತಿಯರು ಸಾಹಸ ಕ್ರೀಡೆಯಲ್ಲಿ ನುರಿತಾದ ಮಾತ್ರ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಡರಾಗಲು ಸಾಧ್ಯ. ಪೋಷಕರು ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಮತ್ತು ಸ್ಪರ್ಧಾ ಮನೋಭಾವನೆ ಬೆಳೆಸಬೇಕು. ಯುವಕರಿಗೆ ಸಾಹಸಮಯ, ಆತ್ಮವಿಶ್ವಾಸ ಬೆಳೆಸುವ ಅಕಾಡೆಮಿಗಳಿರಬೇಕು ಎಂದರು.
ಯುವಕಹಿಯುವತಿಯರು ತಮ್ಮ ಜೀವನ ಗುರಿಯನ್ನು ಮುಟ್ಟಲು ಒಳ್ಳೆಯ ಅವಕಾಶ ಸಿಕ್ಕಿದೆ. ಇಂತಹ ಆರ್ಎಂಆರ್ (ಖಒಖ) ಬೃಹತ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಆತ್ಮಸ್ಥೈರ್ಯ ಬೆಳೆಸಿಕೊಂಡು, ಪೋಷಕರ ಕನಸನ್ನು ಈಡೇರಿಸಬೇಕು ಎಂದು ಸಲಹೆ ನೀಡಿದರು.
ಬೆಳಗಾವಿಯಲ್ಲಿ ಖಒಖ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾ ತರಬೇತಿಯ ಕೇಂದ್ರವಾಗಿರುವುದು ಹೆಮ್ಮೆಯ ವಿಷಯ ಎಂದು ಇಂಗಿತ ವ್ಯಕ್ತಪಡಿಸಿದರು.
ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಫಿಟ್ನೆಸ್, ಕ್ರಾಸ್ ಫಿಟ್, ಯೋಗ ಮತ್ತು ಫಿಸಿಯೋಥೆರಪಿ ಮತ್ತು ಸೇರಿದಂತೆ ವಿವಿಧ ಕ್ರೀಡೆಗಳಿಗೆ ತರಬೇತಿ ನೀಡುತ್ತಿರುವುದು ಬೆಳಗಾವಿ ಯುವಕರ ಬದುಕಿಗೆ ಆಸರೆಯಾಗಲಿದೆ. ಈ ಕ್ರೀಡಾ ತರಬೇತಿಯನ್ನು ಪಡೆಯಲು ಮಕ್ಕಳಿಗೆ ಪೌಷ್ಟಿಕಾಂಶ ತುಂಬಾನೆ ಮುಖ್ಯವಾಗಿದೆ. ಈ ಕ್ರೀಡಾ ತರಬೇತಿಯಲ್ಲಿ ಪೌಷ್ಟಿಕಾಂಶದ ತರಬೇತಿ ಇರುವುದು ಮಕ್ಕಳಿಗೆ ಬಹಳಷ್ಟು ಅನುಕೂವಾಗಲಿದೆ ಎಂದು ಹೇಳಿದರು.
ಆರ್ಎಂಆರ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ, ಋಠ-ಖಠರ ಎಂಬ ಹೆಸರೇ ಮಕ್ಕಳನ್ನು ಇನ್ನಷ್ಟೂ ಸದೃಢಗೊಳಿಸಲಿದೆ. ಈ ಅಕಾಡೆಮಿಯ ತರಬೇತಿಯಲ್ಲಿ ನುರಿತ ಮಕ್ಕಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಿಂಚಲಿ, ಬೆಳಗಾವಿಯ ಕೀರ್ತಿ ಹೆಚ್ಚಿಸುವ ಆರ್ಎಂಆರ್ ಸ್ಪೋರ್ಟ್ಸ್ ಅಕಾಡೆಮಿ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.
ಆರ್ಎಂಆರ್ ಅಕಾಡೆಮಿಯ ಸಂಸ್ಥಾಪಕರಾದ ಮೋಹನ್ ರಾಯ್ಕರ್ ಅವರು ಮಾತನಾಡಿ, ಸ್ಪರ್ಧಾಳುಗಳಿಗೆ ಶಿಸ್ತು, ಶ್ರದ್ಧೆ ಮುಖ್ಯವಾಗಿದೆ. ನಾವು ಯಶಸ್ಸು ಸಾಧಿಸಲು ಪ್ರಯತ್ನ ನಿರಂತರವಾಗಿರಬೇಕು. ಇದು ಅಕಾಡೆಮಿಯ ತಂತ್ರಜ್ಞಾನ, ಶಕ್ತಿ ಕೇಂದ್ರವಾಗಿದೆ. 6 ರಿಂದ 10 ವರ್ಷದ ಮಕ್ಕಳಿಗೆ ವಿವಿಧ ಕ್ರೀಡೆ ತರಬೇತಿ, ಯೋಗ ಮತ್ತು ಕ್ರೀಡಾ ಭವಿಷ್ಯಕ್ಕೆ ಈ ಮೂಲಕ ಅನುಕೂಲವಾಗಲಿದೆ. ಈ ಅಕಾಡೆಮಿಯಲ್ಲಿ ತರಬೇತಿ ಪಡೆದ ಮಕ್ಕಳು ಅಥ್ಲೆಟಿಕ್ಸ್ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ವಿಭಾಗದ ಮುಖ್ಯ ತರಬೇತಿದಾರ ಭೂಷಣ ಅನ್ನೇಕರ್, ಟೇಬಲ್ ಟೆನಿಸ್ ವಿಭಾಗದ ಮುಖ್ಯಸ್ಥರಾದ ಸಿದ್ದಾರ್ಥ್ ಪುಟಾಣೆ, ರಾಜಾರಾಮ ರಾಯ್ಕರ್ , ಕುನಾಲ್ ರಾಯ್ಕರ್, ಶೈಲಜಾ ಭಿಂಗೆ ಹಾಗೂ ಇತರರು ಇದ್ದರು.
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ 