ಸರ್ಕಾರವು ಒಳ ಮೀಸಲಾತಿ ಮಾಡಿ ಸಮಾಜಗಳಿಗೆ ಅನ್ಯಾಯ ಮಾಡಿದ್ದು ಇದನ್ನು ಖಂಡಿಸಿ ಕೇಂದ್ರಗಳಲ್ಲಿ ಪ್ರತಿಭಟನೆ
Protests at centers condemning the government's injustice to communities through internal reservati
ರಾಣೆಬೆನ್ನೂರ 10 : ರಾಜ್ಯದಲ್ಲಿರುವ "ಕೊಲಂಬೋ" ಸಮಾಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಒಳ ಮೀಸಲಾತಿ ಮಾಡಿ ಈ ಸಮಾಜಗಳಿಗೆ ಅನ್ಯಾಯ ಮಾಡಿದ್ದು ಇದನ್ನು ಖಂಡಿಸಿ ಮಾ.10ರಂದು ಮುಂಜಾನೆ 11 ಘಂಟೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಿಸಲಾಗುವುದು ಎಂದುಸಮಾಜದ ಮುಖಂಡ, ನಿವೃತ್ತ ನ್ಯಾಯಾಧೀಶ ಡಾ. ಸುಭಾಸಚಂದ್ರ ರಾಠೋಡ ಹೇಳಿದರು.ಸೋಮವಾರದಂದು ಸ್ಥಳೀಯ ವಿಹಾನ್ ಸಭಾಭವನದಲ್ಲಿ ಬಂಜಾರಾ, ಭೋವಿ, ಕೊರವ, ಲಂಬಾಣಿ, ಕೊರಮ ಸಮಾಜದವರ ವತಿಯಿಂದ ಏರಿ್ಡಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಒಳ ಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದವರು ಎಚ್ಚರಿಸಿದರು.ಶೀಘ್ರವಾಗಿ ಈ ಅನ್ಯಾಯ ಸರಿಪಡಿಸದಿದ್ದರೆ, ನಿರ್ಣಯ ಮಾಡಿದರೆ ಮಾ. 12 ರಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಜೊತೆಗೆ ನ್ಯಾಯ ಸಿಗುವವರೆಗೂ ಹೋರಾಟ ಕೈಗೊಳ್ಳಲಾಗುವುದು ಎಂದು ಸುಭಾಸಚಂದ್ರ ಎಚ್ಚರಿಸಿದರು. ರಾಮಣ್ಣ ನಾಯಕ, ಜಯರಾಮ ಮಳ್ಳಾಪುರ, ಹೇಮಂತ ಕುಮಾರ್, ಅನಿಲಕುಮಾರ್ ಮಹಾರಾಜ್, ಶಾಮರಾವ್ ಪವಾರ್, ತಿಪ್ಪಣ್ಣ ವಡೆಯರ್, ವಿನೋದ ಚವ್ಹಾಣ, ಗೋಪಿ ರಾಥೋಡ, ರಮೇಶ ಹುಲಿಹಳ್ಳಿ, ಖಂಡೆಪ್ಪ ಭಜಂತ್ರಿ ಸೇರಿದಂತೆ ಸಮಾಜದ ಮುಖಂಡರುಗಳು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 