ಕಳಪೆ ಬೀಜ ವಿತರಣೆ 5ನೇ ದಿನಕ್ಕೆ ಕಾಲಿಟ್ಟ ಅನ್ನದಾತನ ಧರಣಿ
Poor seed distribution: Annadat's dharna enters 5th day
ಕಳಪೆ ಬೀಜ ವಿತರಣೆ 5ನೇ ದಿನಕ್ಕೆ ಕಾಲಿಟ್ಟ ಅನ್ನದಾತನ ಧರಣಿ
ಬ್ಯಾಡಗಿ 25: ತಾಲೂಕಿನಲ್ಲಿ ಹಿರೇಹಳ್ಳಿ, ಚಿಕ್ಕಳ್ಳಿ ಗ್ರಾಮಗಳಲ್ಲಿ ಮೆಣಸಿನ ಕಾಯಿ ಬೀಜವನ್ನು ನೀಡಿ ರೈತರಿಗೆ ಮೋಸ ಮಾಡಿದ ಕಂಪನಿಯ ವಿರುದ್ಧ ಕಂಪನಿಯನ್ನು ಬ್ಲಾಕ್ ಲಿಸ್ಟಿಗೆ ಹಾಕಿ ಹಾಕಲು ಮತ್ತು ಅನ್ಯಾಯವಾದ ಅನ್ನದಾತನಿಗೆ ಪರಿಹಾರ ಒದಗಿಸುವ ಸಲುವಾಗಿ ಮಾನ್ಯ ಶಾಸಕರೇ ಕಚೇರಿ ಎದುರಿಗೆ 21ನೇ ಮೇ 2025 ರಿಂದ ಇಲ್ಲಿಯವರೆಗೆ ರೈತರು ಧರಣಿ ನಡೆಸುತ್ತಾ ಬಂದಿದ್ದು ಇಂದು ಸಹ ಧರಣಿಯನ್ನು ನಡೆಸಲಾಯಿತು, ಧರಣಿ ಸ್ಥಳಕ್ಕೆ ತಹಶೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ಭೇಟಿ ನೀಡಿ ರೈತರಿಗೆ ಮನವೊಲಿಸಲು ಮುಂದಾದರು ಮುಂಗಾರು ಹಂಗಾಮು ಜೋರಾಗಿದ್ದು ರೈತರು ತಮ್ಮ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ ಎಂದು ಹೇಳಿದರು ಆದರೆ ಅನ್ನದಾತನು ಮೊದಲು ರೈತರಿಗೆ ಮೆಣಸಿನ ಕಾಯಿ ಹಾಳಾದ ನಷ್ಟವನ್ನು ತುಂಬಿ ಕೊಡಿ ತಕ್ಷಣವೇ ನಾವು ಧರಣಿಯನ್ನು ಕೈಬಿಡುತ್ತೇವೆ ಎಂದು ಅನ್ನದಾತರು ಹೇಳಿದರು ಹಾಗಾಗಿ ತಹಶೀಲ್ದಾರ್ ಅವರು ಸಂಧಾನ ವಿಫಲವಾದಂತಾಯಿತು.
ಈ ವಳೇ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಬಳ್ಳಾರಿ ಮಾತನಾಡಿ ಜನಪ್ರತಿನಿಧಿಗಳು ರೈತರ ಗೋಳನ್ನು ಕೇಳಲು ಬಾರದೇ ಇರುವುದು ಇದು ಆಕ್ರೋಶದ ಧರಣಿ ಮೊದಲು ಜನಪ್ರತಿನಿಧಿಗಳು ಅಧಿಕಾರ ಚುಕ್ಕಾಣಿ ಹಿಡಿಯುವಾಗ ರೈತರ ಹೆಸರೇಳಿ ಅಧಿಕಾರವನ್ನು ಗದ್ದುಗೆ ಎರುತ್ತಾರೆ ಆದರೆ ಅನ್ನದಾತನಿಗೆ ನಷ್ಟವಾದಾಗ ಸರಿಪಡಿಸಲು ಬಾರದೆ ಇರುವುದು ಇದು ಬೇಸರದ ಸಂಗತಿ ಶೀಘ್ರವೇ ಮಾನ್ಯ ಶಾಸಕರು ನಮ್ಮ ಬೇಡಿಕೆಗಳನ್ನು ಹಾಗೂ ಕಳಪೆ ಬೀಜ ದಿಂದ ಬೆಳೆಯ ಹಾಳು ಮಾಡಿಕೊಂಡ ರೈತರ ನಷ್ಟವಾದ ಪರಿಹಾರವನ್ನು ಕೊಡಿಸುವವರೆಗೂ ನಾವು ಧರಣಿಯನ್ನು ಅಂತ್ಯಗೊಳಿಸುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಗಂಗಣ್ಣ ಎಲಿ. ಕೆ ವಿ ದೊಡ್ಗೌಡ್ರು. ಜಾನ್ ಪುನೀತ್. ರುದ್ರಗೌಡ ಕಾಡನ ಗೌಡ್ರು ಹಾಗೂ ನೂರಾರು ರೈತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 