ನಿಲುಗಡೆಯಾಗದ ಬಸ್‌ಗಾಗಿ ಜನರ ಪರದಾಟ

ನಿಲುಗಡೆಯಾಗದ ಬಸ್‌ಗಾಗಿ ಜನರ ಪರದಾಟ People's march for a bus that won't stop

ಯಮಕನಮರಡಿ, 15 : ಚಿಕ್ಕೋಡಿ, ಸಂಕೇಶ್ವರ, ಹಾಗೂ ನಿಪ್ಪಾಣಿ ಘಟಕದ ಬಸ್ಸುಗಳು ಹತ್ತರಗಿ, ಯಮಕನಮರಡಿ ಕ್ರಾಸ್, ಚಿಕ್ಕಾಳಗುಡ್ಡ ಹಾಗೂ ಉಳ್ಳಾಗಡ್ಡಿ ಖಾನಾಪೂರ ಗ್ರಾಮಗಳಿಗೆ ನಿಲುಗಡೆ ಮಾಡುವಂತೆ ಚಿಕ್ಕೋಡಿಯ ಸಾರಿಗೆ ಅಧಿಕಾರಿಗಳು ಆದೇಶ ಹೋರಡಿಸಿ ತಿಂಗಳು ಕಳೆದರೂ ಬಸ್ ನಿಲುಗಡೆ ಆಗುತ್ತಿಲ್ಲ ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲಾ ಉಸ್ತೂವಾರಿ ಸಚಿವ ಸತೀಶ ಜಾರಕಿಹೋಳಿ ಸೂಚನೆ ಮೇರೆಗೆ ನಿಲುಗಡೆ ಆದೇಶಿಸಲಾಗಿತ್ತು ಜನರು ಪ್ರಾರಂಭದಲ್ಲಿ ಬಸ್ಸಗೆ ಪೂಜೆ ಸಲ್ಲಿಸಿ ಖುಷಿ ಪಟ್ಟಿದ್ದರು ಆದರೇ ಇದುವರೆಗೂ ಸಮಸ್ಯೇ ಬಗೆಹರಿದಿಲ್ಲ ಪರಿಣಾಮ ಬಸ್ ನಿಲ್ಲಿಸುವಂತೆ ಕೈ ಮಾಡಿ ಪ್ರಯಾಣಿಕರು ಹೈರಾಣಾಗಿದ್ದಾರೆ.  ಹತ್ತರಗಿಯ ಬಸ್ ನಿಲ್ದಾಣಕ್ಕೆ ಬಸ್ ಬಾರದೆ ಹೊರಗಡೆಯಿಂದಲೇ ಬಸ್ ಸವಾರರು ಹೊಡೆದುಕೊಂಡು ಹೊಗುತ್ತಾರೆ ಅದಕ್ಕಾಗಿ ಪ್ರಯಾಣಿಕರು ಆಕಡೆ ಇಕಡೆ ಓಡಾಡಿಕೊಂಡು ಬಸ್ ಹಿಡಿಯಲು ಹರಸಾಹಸ ಪಡುವಂತಾಗಿದೆ ಆದಕಾರಣ ಇಲಾಖೆಯವರು ಗಮನಿಸಿ ಸೂಕ್ತ ಕ್ರಮ ಕೈಗೊಂಡು ಬಸ್ ಸಿಬ್ಬಂದಿಗಳಿಗೆ ತಿಳಿಸಬೇಕಾಗಿದೆ.