ದೇಶದ ಭದ್ರತೆ ಪ್ರತಿಯೊಬ್ಬರ ಜವಾಬ್ದಾರಿ, ಮೇಕ್ ಇನ್ ಇಂಡಿಯಾಗೆ ಕೊಡುಗೆ ನೀಡಿ : ತೇಜಸ್ವಿ ಸೂರ್ಯ
National security is everyone's responsibility, contribute to Make in India: Tejaswi Surya
ಬೆಳಗಾವಿ 20 : ದೇಶದ ಭದ್ರತೆ ಪ್ರತಿಯೊಬ್ಬರ ಜವಾಬ್ದಾರಿ, ಉದ್ಯಮಿಗಳಾಗಿ ಮೇಕ್ ಇನ್ ಇಂಡಿಯಾಗೆ ಕೊಡುಗೆ ನೀಡಿ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕರೆ ನೀಡಿದ್ದಾರೆ.ಕೆಎಲ್ಎಸ್ ಸಂಸ್ಥೆಯ ಕೆ.ಕೆ.ವೇಣುಗೋಪಾಲ ಸಭಾಭವನದಲ್ಲಿ ಶನಿವಾರ, ಸಮಗ್ರ ರಾಷ್ಟ್ರೀಯ ಭದ್ರತೆಗಾಗಿ ವೇದಿಕೆ- ಫಿನ್ಸ್ ಇಂಡಿಯಾ ಬೆಳಗಾವಿ ಶಾಖೆಯ ದಶಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ನಮ್ಮ ಸೇನೆಗೆ ಸಾಫ್ಟ್ವೇರ್ ಸೇರಿದಂತೆ ಅಗತ್ಯ ಭಾಗಗಳನ್ನು ತಯಾರಿಸಿ ಮತ್ತು ದೇಶದ ಭದ್ರತೆಗೆ ಕೊಡುಗೆ ನೀಡಿ ಎಂದು ಅವರು ಮನವಿ ಮಾಡಿದರು.
ನಮ್ಮಲ್ಲಿ ವೈವಿಧ್ಯತೆ ಇದೆ, ಆದರೆ ನಮ್ಮ ಸಂಸ್ಕೃತಿ ಒಂದೇ. ನಾವು ಒಟ್ಟಿಗೆ ಬದುಕುತ್ತೇವೆ, ನಮ್ಮ ನಮ್ಮ ಆಚರಣೆ ಮಾಡುತ್ತೇವೆ ಎಂದ ಅವರು, ವಂದೇ ಮಾತರಂ ಮಹತ್ವವನ್ನು ವಿವರಿಸಿದರು. ಇಂತಹ ಕಾರ್ಯಕ್ರಮಗಳು ಯುವಕರು ಮತ್ತು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತವೆ. ಯುವಕರು ದೊಡ್ಡ ದೊಡ್ಡ ಕನಸು ಕಾಣಬೇಕು. ಅದನ್ನು ಸಾಧಿಸುವ ದಿಸೆಯಲ್ಲಿ ಹೆಜ್ಜೆ ಹಾಕಬೇಕು ಎಂದು ಹೇಳಿದರು. ಬೆಂಗಳೂರು ಗೋಸಾಯಿ ಮಠದ ಮಂಜುನಾಥ್ ಸ್ವಾಮಿ, ಶಿವಾಜಿ ಮಹಾರಾಜರ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿ ತೇಜಸ್ವಿಯವರನ್ನು ಆಶೀರ್ವದಿಸಿದರು.
ಕಾರ್ಯಕ್ರಮದ ಆರಂಭದಲ್ಲಿ, ಗಣ್ಯರು ಭಾರತ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸಿದರು. ವಿನಿತಾ ಕುಲಕರ್ಣಿ ವಂದೇ ಮಾತರಂ ಪ್ರಸ್ತುತಪಡಿಸಿದರು. ಅಪೂರ್ವ ಖಾನೋಲ್ಕರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಮಯದಲ್ಲಿ, ಫಿನ್ಸ್ನ ಮೃತ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 2015 ರಲ್ಲಿ ಸ್ಥಾಪನೆಯಾದ ಫಿನ್ಸ್ನ ಹತ್ತು ವರ್ಷಗಳ ಪ್ರಯಾಣವನ್ನು ಕಿಶೋರ್ ಕಾಕಡೆ ಅವರು ಶ್ರವ್ಯ -ದೃಶ್ಯ ಮಾಧ್ಯಮದ ಮೂಲಕ ಪ್ರಸ್ತುತಪಡಿಸಿದರು.
ಗೋಗಟೆ ಕಾಲೇಜಿನ ಎನ್ಸಿಸಿ ಕೆಡೆಟ್ಗಳ ಜೊತೆಗೆ, ಅರುಣಾ ನಾಯಕ್, ಅರುಣಾ ಸರಾಫ್, ಅಪೂರ್ವ ಖಾನೋಲ್ಕರ್, ಕರ್ನಲ್ ರಾಮಕೃಷ್ಣ ಜಾಧವ್, ಕರ್ನಲ್ ಮಧುಕರ್ ಕದಮ್, ಬಿ.ಆರ್. ಶಂಕರ್ ಗೌಡ, ಕ್ಯಾಪ್ಟನ್ ಪ್ರಾಣೇಶ್ ಕುಲಕರ್ಣಿ, ಪರಮೇಶ್ವರ ಹೆಗಡೆ, ಸದಾನಂದ್ ಹುಂಬರವಾಡಿ, ಅತುಲ್ ದೇಶಮುಖ್, ವಕೀಲ ಮುಂಡರಗಿ, ಗೋಗಟೆ ಕಾಲೇಜಿನ ಸಿಬ್ಬಂದಿ, ಪ್ರಬುದ್ಧ ಭಾರತದ ಕಾರ್ಯಕರ್ತರು ಉಪಸ್ಥಿತರಿದ್ದರು. ಫಿನ್ಸ್ನ ಸಂಚಾಲಕ ಮೇಜರ್ ಜನರಲ್ ಕೆ.ಎನ್. ಮಿರ್ಜಿ ಅವರು ಎಲ್ಲರಿಗೂ ಧನ್ಯವಾದ ಅರ್ಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 