ದೇಶದ ಋಣ ತೀರಿಸಲು ಎನ್.ಎಸ್.ಎಸ್. ಪ್ರೇರಕ ಶಕ್ತಿ : ಲಟ್ಟ್ಟಿ
NSS is the driving force to pay off the country's debt: Latti
ಲೋಕದರ್ಶನ ವರದಿ
ಗೋಕಾಕ 10 : ಭೂಮಿಗೆ ಬಂದ ಪ್ರತಿಯೊಬ್ಬ ಮನುಷ್ಯ ಈ ಮೂರು ಋಣಗಳನ್ನು ತಿರಿಸಬೇಕಾಗುತ್ತದೆ. ಒಂದನೆಯದಾಗಿ ಮಾತಾ-ಪಿತೃ ಋಣ, ಎರಡನೆಯದಾಗಿ ಗುರುವಿನ ಋಣ ಹಾಗೂ ಮೂರನೆಯದಾಗಿ ದೇಶದ ಋಣ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಈ ಮೂರು ಋಣಗಳನ್ನು ತೀರಿಸಿ ಸಾರ್ಥಕ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವೆಂದು ಪ್ರೌಢ ಶಾಲಾ ನಿವೃತ್ತ ಶಿಕ್ಷಕ ಪಿ.ಟಿ. ಲಟ್ಟಿ ಅವರು ನುಡಿದರು. ಅವರು ಗೋಕಾಕದ ಜೆ. ಎಸ್. ಎಸ್. ಪದವಿ ಮಹಾವಿದ್ಯಾಲಯ ದತ್ತು ಗ್ರಾಮ ಬೆಣಚಿನಮರಡಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಿ. ಎಂ. ತುರಡಗಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಎನ್.ಎಸ್.ಎಸ್. ಕಾರ್ಯ ಚಟುವಟಿಕೆಗಳ ಪ್ರಾಮುಖ್ಯತೆಯ ಕುರಿತು ತಿಳಿಸಿದರು. ಗ್ರಾಮದ ಹಿರಿಯರಾದ ಬಾಳೇಶ ಗಿಡ್ನವರ, ಮಂಜುನಾಥ ಗಿಡ್ನವರ, ಮಲ್ಲಪ್ಪಾ ಅಳಗುಂಡಿ ಬಸವರಾಜ ಮ್ಯಾಕಲಮರಡಿ ಹಾಗೂ ಮಹಾವಿದ್ಯಾಲಯದ ಡಾ. ಕೆ. ಆಯ್. ಇಂಡಿಕಾರ, ಡಾ. ವಿಜಯಕುಮಾರ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಎಮ್.ವ್ಹಿ. ಗೊರಗುದ್ದಿ ಸ್ವಾಗತಿಸಿದರು. ಇನ್ನೋರ್ವ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಸಿ.ಎ. ಮಸರಗುಪ್ಪಿ ವಂದಿಸಿದರು. ಕು. ಲಕ್ಷ್ಮೀ ಬಾಗಾಡಿ ಕಾರ್ಯಕ್ರಮ ನಿರೂಪಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 