ಸಚಿವ ತಿಮ್ಮಪೂರ ವಿರುದ್ಧ ಭಾಜಪ ಮುಖಂಡರ ಸುಳ್ಳು ಆರೋಪಗಳಿಗೆ ಮುಸ್ಲಿಂ ಸಮುದಾಯದ ಖಂಡನೆ
Muslim community condemns BJP leaders' false allegations against Minister Thimmapura
ಮಹಾಲಿಂಗಪುರ 11: ದೀನ, ದಲಿತರ, ಹಿಂದುಳಿದ ವರ್ಗಗಳ ಅಭಿವೃದ್ಧಿಯ ಚಿಂತಕರಾಗಿರುವ, ಲವ ಲೇಶವೂ ಭ್ರಷ್ಟಾಚಾರ ಇಲ್ಲದ ರಾಜಕೀಯ ರಂಗದ ಶುದ್ಧ ಹಸ್ತ ಉಸ್ತುವಾರಿ ಮತ್ತು ಅಬಕಾರಿ ಸಚಿವ ಆರ್. ಬಿ. ತಿಮ್ಮಪೂರ ಅವರ ವಿರುದ್ಧ ಭಾಜಪದ ಮುಖಂಡರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅವರ ತೇಜೋವಧೆ ಮಾಡುತ್ತಿರುವ ಕ್ರಮವನ್ನು ಮಹಾಲಿಂಗಪುರ ಪಟ್ಟಣದ ಅಂಜುಮನ ಸಂಸ್ಥೆ ಮತ್ತು ಮುಸ್ಲಿಂ ಸಮಾಜದ ಸರ್ವ ಜನತೆ ವತಿಯಿಂದ ಉಗ್ರವಾಗಿ ಖಂಡಿಸುತ್ತೇವೆ ಎಂದು ಪುರಸಭೆ ಸದಸ್ಯ ಹಾಗೂ ಸಮಾಜದ ಹಿರಿಯ ಮುಖಂಡ ಮುಸ್ತಾಕ ಚಿಕ್ಕೋಡಿ ಹೇಳಿದರು.
ಬುಧವಾರ ಮುಂಜಾನೆ ಅಂಜುಮನ್- ಎ- ಇಸ್ಲಾಂ ಕಮಿಟಿ ಕಚೇರಿ ಮುಂಭಾಗದಲ್ಲಿ ಸೇರಿದ ಸರ್ವ ಸದಸ್ಯರು ಮತ್ತು ಊರ ಪ್ರಮುಖರ ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ಸಿ.ಎಂ.ಸಿದ್ದರಾಮಯ್ಯ ಸರ್ಕಾರ ಸರ್ವೇ ಜನಃ ಸುಖಿನೋಭವಂತು ತತ್ವದ ಅಡಿ ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುತ್ತಿದೆ,ಇದನ್ನು ಸಹಿಸದ ವಿರೋಧ ಪಕ್ಷ ಭಾಜಪ ಮುಖಂಡರು ಶಾಸಕರು ಮತ್ತು ಸಚಿವರ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸಿದ್ದು, ಸಚಿವರು ಮತ್ತು ಕಾಂಗ್ರೆಸ್ ಪಕ್ಷ ಎಂದೂ ಮನಿಯುವುದಿಲ್ಲ ಎಂದರು.
ಇನ್ನೋರ್ವ ಅಂಜುಮನ್ ಕಾರ್ಯದರ್ಶಿ ಶಂಶುದ್ದೀನ್ ತೇರದಾಳ ಮಾತನಾಡಿ,2.5 ಸಾವಿರ ಕೋಟಿ ಹಗರಣದ ಕುರಿತು ಭಾಜಪ ಮುಖಂಡರ ಬಳಿ ಸೂಕ್ತ ದಾಖಲೆಗಳಿದ್ದರೆ ಬಿಡುಗಡೆಗೊಳಿಸಲು ಸಚಿವರು ಹಲವಾರು ಬಾರಿ ಹೇಳಿಕೆ ನೀಡಿದ್ದಾರೆ.ಆರೋಪ ಮಾಡುವ ಇವರು ಇಲ್ಲಿಯವರೆಗೆ ಪುಷ್ಟಿ ನೀಡುವಂತಹ ಯಾವುದೇ ದಾಖಲೆಗಳನ್ನು ಬಿಡುಗಡೆಗೊಳಿಸಿಲ್ಲ, ಇದರಿಂದ ತಿಳಿಯುವುದು ಏನೆಂದರೆ ದಲಿತ ನಾಯಕ ಮತ್ತು ಸಚಿವರನ್ನು ಸುಳ್ಳು ಆರೋಪಗಳಿಂದ ಇಕ್ಕಟ್ಟಿಗೆ ಶಿಲುಕಿಸಿ ಅವರಿಂದ ರಾಜೀನಾಮೆ ಪಡೆಯಬೇಕೆಂಬ ದೊಡ್ಡ ಹುನ್ನಾರ ವಿರೋಧ ಪಕ್ಷದಿಂದ ನಡೆದಿದೆಯೇ ಎಂಬ ಸಂದೇಹ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ ಎಂದರು.
ಖಂಡನಾ ಸಭೆಯಲ್ಲಿ ಅಂಜುಮನ್ ಅಧ್ಯಕ್ಷ ಸಜನಸಾಬ ಪೆಂಡಾರಿ, ಉಪಾಧ್ಯಕ್ಷ ಫಾರೂಖ ಪಕಾಲಿ ಸದಸ್ಯರಾದ ನೂರ ಪೆಂಡಾರಿ, ನಜೀರ್ ಝಾರೆ, ಮೀರಾ ತಟಗಾರ, ಪೈಗಂಬರ್ ಪೆಂಡಾರಿ, ಬಾಬು ಸನದಿ, ಬಾಷಾ ಬಿಸ್ತಿ, ಮತ್ತು ಹಿರಿಯರಾದ ಸಯ್ಯದ್ ಯಾದವಾಡ, ನಜೀರ್ ಅತ್ತಾರ, ಶಿಕಂದರ ಮೋಪಗಾರ,ದಾದಾ ಕರೋಶಿ, ರಸೂಲ್ ಸಾಂಗ್ಲಿಕರ,ಮೇಹಬೂಬ ಜೀರಗಾಳ, ದಾವಲಸಾಬ ನಗಾರ್ಚಿ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 