ಸುಭಾಷ್ ಚಂದ್ರ ಬೋಸ್ ಅವರ ಕನ್ನಡಕ ಸರಿಪಡಿಸದ ನಗರಸಭೆ ಪೌರಾಯುಕ್ತರು ನಿರ್ಲಕ್ಷ್ಯ
Municipal Commissioner's negligence in not fixing Subhash Chandra Bose's glasses
ಕಾರವಾರ 06 : ನಗರದ ಹೃದಯಭಾಗದಲ್ಲಿ ಇರುವ ಸುಭಾಷ್ ಚಂದ್ರಬೋಸ್ ವೃತ್ತದಲ್ಲಿ ಇರುವ ಸುಭಾಷ್ ಚಂದ್ರಬೋಸ್ ಪ್ರತಿಮೆಯ ಕನ್ನಡಕ ಮುರಿದು ಬಿದ್ದು ವಿರೂಪವಾಗಿ ಒಂದು ವಾರ ಕಳೆದರೂ, ನಗರಸಭೆಯ ಪೌರಾಯುಕ್ತರು ನಿರ್ಲಕ್ಷ್ಯ ಮಾಡಿದ ಘಟನೆ ನಡೆದಿದೆ. ಸುಭಾಷರ ಪ್ರತಿಮೆಯ ಕನ್ನಡಕ ಕಿತ್ತು ಬಿದ್ದರೂ, ಸರಿಪಡಿಸದೇ ಕಾರವಾರ ನಗರಸಭೆ ನಿರ್ಲಕ್ಷದ ವಿರುದ್ಧ ಜನ ಕಿಡಿ ಕಾರಿದ್ದಾರೆ. ಕಾರವಾರ ನಗರಸಭೆಯಿಂದ 1973 ರಲ್ಲಿ ಸುಭಾಷ್ ಚಂದ್ರ ಬೋಸ್ ರ ಪ್ರತಿಮೆಯನ್ನು ಪ್ರತಿಷ್ಟಾಪನೆ ಮಾಡಿದ್ದು, ನಗರದ ಹೃದಯ ಭಾಗದಲ್ಲಿ ಇದೆ. ಈ ಪ್ರತಿಮೆ ಇರುವ ಸ್ಥಳವನ್ನು ಸುಭಾಷ್ ಚಂದ್ರಬೋಸ್ ಸರ್ಕಲ್ ಎಂದು ಕರೆಯಲಾಗುತ್ತಿದೆ. ನಗರದ ಪ್ರವೇಶ ರಸ್ತೆಯ ಸರ್ಕಲ್ ಆಗಿದ್ದು ಒಂದು ವಾರದಿಂದ ಈ ಪ್ರತಿಮೆ ವಿರೂಪವಾದರೂ, ನಗರಸಭೆ ಸರಿಪಡಿಸುವ ಕೆಲಸಕ್ಕೆ ಕೈಹಾಕಿಲ್ಲ. ಮೂರ್ತಿಯ ಕನ್ನಡಕ ತುಂಡಾಗಿದೆ . ಹೀಗಿದ್ದರೂ ಒಂದು ವಾರದಿಂದ ವಿರೂಪವಾಗಿ ಹಾಗೆಯೇ ಇದ್ದು, ಹಲವರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನಾದರೂ ನಗರಸಭೆ ಬೋಸರ ಕನ್ನಡಕ ಸರಿಪಡಿಸಲಿದೆಯೇ ಎಂದು ಕಾದು ನೋಡಬೇಕಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 