ಸುಭಾಷ್ ಚಂದ್ರ ಬೋಸ್ ಅವರ ಕನ್ನಡಕ ಸರಿಪಡಿಸದ ನಗರಸಭೆ ಪೌರಾಯುಕ್ತರು ನಿರ್ಲಕ್ಷ್ಯ
Municipal Commissioner's negligence in not fixing Subhash Chandra Bose's glasses
ಕಾರವಾರ 06 : ನಗರದ ಹೃದಯಭಾಗದಲ್ಲಿ ಇರುವ ಸುಭಾಷ್ ಚಂದ್ರಬೋಸ್ ವೃತ್ತದಲ್ಲಿ ಇರುವ ಸುಭಾಷ್ ಚಂದ್ರಬೋಸ್ ಪ್ರತಿಮೆಯ ಕನ್ನಡಕ ಮುರಿದು ಬಿದ್ದು ವಿರೂಪವಾಗಿ ಒಂದು ವಾರ ಕಳೆದರೂ, ನಗರಸಭೆಯ ಪೌರಾಯುಕ್ತರು ನಿರ್ಲಕ್ಷ್ಯ ಮಾಡಿದ ಘಟನೆ ನಡೆದಿದೆ. ಸುಭಾಷರ ಪ್ರತಿಮೆಯ ಕನ್ನಡಕ ಕಿತ್ತು ಬಿದ್ದರೂ, ಸರಿಪಡಿಸದೇ ಕಾರವಾರ ನಗರಸಭೆ ನಿರ್ಲಕ್ಷದ ವಿರುದ್ಧ ಜನ ಕಿಡಿ ಕಾರಿದ್ದಾರೆ. ಕಾರವಾರ ನಗರಸಭೆಯಿಂದ 1973 ರಲ್ಲಿ ಸುಭಾಷ್ ಚಂದ್ರ ಬೋಸ್ ರ ಪ್ರತಿಮೆಯನ್ನು ಪ್ರತಿಷ್ಟಾಪನೆ ಮಾಡಿದ್ದು, ನಗರದ ಹೃದಯ ಭಾಗದಲ್ಲಿ ಇದೆ. ಈ ಪ್ರತಿಮೆ ಇರುವ ಸ್ಥಳವನ್ನು ಸುಭಾಷ್ ಚಂದ್ರಬೋಸ್ ಸರ್ಕಲ್ ಎಂದು ಕರೆಯಲಾಗುತ್ತಿದೆ. ನಗರದ ಪ್ರವೇಶ ರಸ್ತೆಯ ಸರ್ಕಲ್ ಆಗಿದ್ದು ಒಂದು ವಾರದಿಂದ ಈ ಪ್ರತಿಮೆ ವಿರೂಪವಾದರೂ, ನಗರಸಭೆ ಸರಿಪಡಿಸುವ ಕೆಲಸಕ್ಕೆ ಕೈಹಾಕಿಲ್ಲ. ಮೂರ್ತಿಯ ಕನ್ನಡಕ ತುಂಡಾಗಿದೆ . ಹೀಗಿದ್ದರೂ ಒಂದು ವಾರದಿಂದ ವಿರೂಪವಾಗಿ ಹಾಗೆಯೇ ಇದ್ದು, ಹಲವರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನಾದರೂ ನಗರಸಭೆ ಬೋಸರ ಕನ್ನಡಕ ಸರಿಪಡಿಸಲಿದೆಯೇ ಎಂದು ಕಾದು ನೋಡಬೇಕಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 