ಚಿಕ್ಕೇನಕೊಪ್ಪ ಶರಣರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಸಾಮೂಹಿಕ ವಿವಾಹ
Mass wedding as part of Chickenakoppa Sharan's holy commemoration
ಚಿಕ್ಕೇನಕೊಪ್ಪ ಶರಣರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಸಾಮೂಹಿಕ ವಿವಾಹ
ಕಂಪ್ಲಿ 04: ತಾಲೂಕಿನ ಸಣಾಪುರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಆವರಣದಲ್ಲಿ ಮಂಗಳವಾರ ಚಿಕ್ಕೇನಕೊಪ್ಪ ಚನ್ನವೀರಶರಣರ 30 ನೇ ವರ್ಷದ ಪುಣ್ಯ ಸ್ಮರಣೋತ್ಸವ ಜರುಗಿತು ಬೃಹನ್ಮಠ ಹೆಬ್ಬಾಳ್ ನಾಗಭೂಷಣ ಶಿವಚಾರ್ಯ ಮಹಾಸಾಮಿ ಮಾತನಾಡಿ ಸಣಾಪುರಗ್ರಾಮ ಶರಣರಗ್ರಾಮವಲ್ಲ ಸುವರ್ಣಗ್ರಾಮವಾಗಿದೆ ಧಾರ್ಮಿಕ ಮತ್ತುದಾಸೋಹಕಾರ್ಯಕ್ರಮಕ್ಕೆ ಮುಚ್ಚೂಣಿಯಲ್ಲಿದೆ ಚಿಕ್ಕೇನಕೊಪ್ಪಚನ್ನವೀರಶರಣರ ತತ್ವ ಆದರ್ಶಗಳು ಸಾರ್ಥಕ ಬದುಕನ್ನುರೂಪಿಸುತ್ತವೆ. ಸಾಮೂಹಿಕ ಮದುವೆ ಮಾಡುವದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗುತ್ತದೆ ಇದರಿಂದ ಆರ್ಥಿಕ ಭಾರವನ್ನು ನೀಗಿಸಸಬಹುದು ಜೋಡಿಗಳು ಅರ್ಥಪೂರ್ಣಜೀವನ ಮಾಡುವದರ ಮುಖಾಂತರ ಮಕ್ಕಳಿಗೆ ಸಂಸ್ಕಾರ ಶಿಕ್ಷಣ ನೀಡಲು ಮುಂದಾಗಬೇಕು ಎಂದರು ಬೃಹನ್ಮಠ ಸುಳೇಕಲ್ ಭುವನೇಶ್ವರತಾತ, ಹರಳಹಳ್ಳಿ ಬಹನ್ಮಠ ಗವಿಸಿದ್ದೇಶ್ವರ ಮಹಾಸ್ವಾಮಿ ಮಷ್ಟೂರುಈಶಣ್ಣತಾತನವರು ಸಾನ್ನಿಧ್ಯವಹಿಸಿದ್ದರು.ಚಿಕ್ಕೇನಕೊಪ್ಪಚನ್ನವೀರಶರಣರ ಪುಣ್ಯಸ್ಮರಣೋತ್ಸವಎರಡುಜೋಡಿ ಸಾಮೂಹಿಕ ವಿವಾಹ, ನಾನಾ ಕಾರ್ಯಕ್ರಮಗಳು ಜರುಗಿದವು. ವೀರಭದ್ರೇಶ್ವರದೇವಸ್ಥಾನ ಸಮಿತಿಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಪ್ರಮುಖರಾದ ಜಿ. ಈಶಪ್ಪ, ಟಿ.ವೀರನಗೌಡ, ಕನಕಗಿರಿ. ರೇಣುಕಪ್ಪ, ಜಿ. ಕುಮಾರಸ್ವಾಮಿ, ಕೆ.ಮರಿಶಾಂತ, ಎಂ.ಚನ್ನಪ್ಪ, ಚಿಕ್ಕಣ ಸೇರಿ ಸದ್ಭಕ್ತರು, ಚಿಕ್ಕೇನಕೊಪ್ಪಚನ್ನವೀರ ಶರಣರ ಬಳಗಮತ್ತು ಗ್ರಾಮಸ್ಥರಿದ್ದರುಇದ್ದರು. ಫೆ001 ಸಣಾಪುರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಆವರಣದಲ್ಲಿ ಮಂಗಳವಾರ ಚಿಕ್ಕೇನಕೊಪ್ಪ ಚನ್ನವೀರಶರಣರ 30 ನೇ ವರ್ಷದ ಪುಣ್ಯ ಸ್ಮರಣೋತ್ಸವ ಅಂಗವಾಗಿ ಸಾಮೂಹಿಕ ವಿವಾಹ ಜರುಗಿದವು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 