ಕಲಾಪ ಬಹಿಷ್ಕರಿಸಿ ರೈತ ಹೋರಾಟಕ್ಕೆ ನ್ಯಾಯವಾದಿಗಳ ಬೆಂಬಲ
Lawyers support farmers' struggle by boycotting proceedings
ಇಂಡಿ 05: ತಾಲ್ಲೂಕಿನ ಹೃದಯ ಭಾಗದಲ್ಲಿರುವ ಶ್ರೀ ಬಸವೇಶ್ವರ ವೃತ್ತದ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಹಸಿರು ಸೇನೆ ವತಿಯಿಂದ ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಆಗುವರಿಗೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 4ನೇ ದಿನಕ್ಕೆ ಕಾಲಿಟ್ಟಿದೆ.ಈ ಹೋರಾಟಕ್ಕೆ ಬೆಂಬಲ ಸೂಚಿಸಿದ ಇಂಡಿ ತಾಲೂಕು ನ್ಯಾಯವಾದಿ ಸಂಘದ ವತಿಯಿಂದ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಇಂಡಿ ಕೊರ್ಟ್ ಆವರಣದಿಂದ ರೈತ ಹೋರಾಟಕ್ಕೆ ಜಯವಾಗಲಿ ಎಂದು ಘೋಷಣೆ ಕೂಗೂತ್ತಾ ಶ್ರೀ ಬಸವೇಶ್ವರ ವೃತ್ತದ ಬಳಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಸಿದ್ದಣ್ಣ ಬೂದಿಹಾಳ ಅವರು ರೈತರು ಮಾಡುತ್ತಿರುವ ಹೋರಾಟ ನ್ಯಾಯಯುತವಾಗಿ ಈ ಹೋರಾಟಕ್ಕೆ ನಮ್ಮ ಇಂಡಿ ತಾಲ್ಲೂಕಿನ ಎಲ್ಲಾ ನ್ಯಾಯವಾದಿಗಳ ಸಂಪೂರ್ಣ ಬೆಂಬಲ ಇದೆ, ನೀವು ನಿಮಗೆ ನ್ಯಾಯ ಸಿಗುವರಿಗೆ ನಾವು ರೈತರ ಪರವಾಗಿ ಇರುತ್ತೆವೆ, ಈ ಹೋರಾಟದಲ್ಲಿ ರೈತರ ಮೇಲೆ ಏನಾದರೂ ಕೇಸ್ ದಾಖಲಾದರೆ ಆ ಕೇಸನ್ನು ಉಚಿತವಾಗಿ ಕೋರ್ಟ್ ನಲ್ಲಿ ವಾದ ಮಾಡಿ ರೈತರಿಗೆ ನ್ಯಾಯ ಕೊಡುಸುತ್ತೆವೆ ಎಂದು ಹೇಳಿದರು ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎಮ್ ಎಮ್ ಬಿರಾದಾರ ಎನ್ ಕೆ ನಾಡಪುರೋಹಿತ ಎಸ್ ಎಸ್ ರೇಬಿನಾಳ ಎಸ್ ಎಲ್ ನಿಂಬರಗಿಮಠ ಎ ಜೆ ಧನಶೇಟ್ಟಿ ಡಿ ಜಿ ಜೊತಗೊಂಡ ಎಸ್ ಆರ್ ಮುಜಗೊಂಡ ಬಿ ಬಿ ಬಿರಾದಾರ ಎಸ್ ಆರ್ ಬಿರಾದಾರ ವಾಯ್ ಎಸ್ ಪೂಜಾರಿ ಎಂ ಎಸ್ ಬೋಸಗಿ ಎಸ್ ಕೆ ರಾಠೋಡ ಎಮ್ ಎಸ್ ಪಾಟೀಲ ಜಿ ಎಸ್ ಪಾಟೀಲ ಪಿ ಬಿ ಪಾಟೀಲ ಎ ಎ ಗಜಾಕೋಶ ಜೆ ಬಿ ಬೇನೂರ ಟಿ ವಾಯ್ ಮೆಂಡೇಗಾರ ಎಂ ಜಿ ಗಾಯಕವಾಡ ಅನೀಲ ಜೋಶಿ ರಮೇಶ್ ಕೊಳಿ ವಿ ಎಸ್ ಚಲವಾದಿ ಎಸ್ ಕೆ ತಮ್ಮಶೇಟ್ಟಿ ಎಮ್ ಎಸ್ ತೇಲಿ ಎ ಎಸ್ ಕೊಟ್ಟಲಿಗಿ ಎಸ್ ಬಿ ಗಿಡಗಂಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 