ಆಲಬಾಲ ಗ್ರಾಮದ ಸರಕಾರಿ ಶಾಲೆಗೆ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಬಸನ್ನವರ ಭೇಟಿ

ಆಲಬಾಲ ಗ್ರಾಮದ ಸರಕಾರಿ ಶಾಲೆಗೆ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಬಸನ್ನವರ ಭೇಟಿ Field Education Officer Ashok Basan's visit to the government school in Alabala village

                 ಜಮಖಂಡಿ 30 : ತಾಲೂಕಿನ ಆಲಬಾಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಊಟದ ತಟ್ಟೆಗಳನ್ನು ಕೊಳಚೆ ನೀರಿನಲ್ಲಿ ತೊಳೆಯಲಾಗುತ್ತಿರುವ ಪೋಟೋ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಆರೋಪಗಳು ಕೇಳಿಬರುತ್ತಿದ್ದು. ಕ್ಷೇತ್ರಶಿಕ್ಷಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ. ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸಿದ್ದಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡದ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಬಸನ್ನವರ ಮಾತನಾಡಿ, ಪರೀಶೀಲನೆ ಸಮಯದಲ್ಲಿ ಶಾಲಾ ಮಕ್ಕಳು ಊಟದ ತಟ್ಟೆಗಳನ್ನು ಕೊಳಚೆ ನೀರಿನಿಂದ ತೊಳೆಯಲಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಕೊಳಚೆ ನೀರಿನ ಬದಲಾಗಿ, ಶುದ್ದ ಕುಡಿಯುವ ನೀರಿನ ಮಷೀನ್ (ಫಿಲ್ಟರ್) ಪಂಪಿನಿಂದ ಹೊರಹೋಗುವ ತ್ಯಾಜ್ಯ ನೀರನ್ನು ಪ್ರತ್ಯೇಕವಾಗಿ ಪೈಪ್ ಮೂಲಕ ಹೊರಹಾಕಲಾಗುತ್ತಿದೆ. 

                ಅದೇ ನೀರಿನಿಂದ ಮಕ್ಕಳು ತಟ್ಟೆಗಳನ್ನು ತೊಳೆಯುತ್ತಿರುವ ಪೋಟೋ ಗಮನಕ್ಕೆ ಬಂದಿದೆ ಎಂದರು. ಶಾಲಾ ಆವರಣದಲ್ಲಿ ಮಕ್ಕಳ ಊಟದ ತಟ್ಟೆಗಳನ್ನು ತೊಳೆಯಲು ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ಬೋರವೇಲ್ ದುರಸ್ಥಿ ಇರುವ ಕಾರಣ ನಳಿಯಲ್ಲಿ ನೀರು ಬರದ ಹಿನ್ನಲೆಯಲ್ಲಿ ಶಾಲಾ ಕೌಂಪೌಡ ಹೊರಗೆ ಹೋಗಿ ಮಕ್ಕಳು ತಟ್ಟೆಯನ್ನು ತೊಳೆಯುತ್ತಿರುವುದು ತಪ್ಪು. ಈ ಕುರಿತು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಬೋರವೇಲ್ ದುರಸ್ಥಿಯ ಬಗ್ಗೆ ಮಾತಿಯನ್ನು ನೀಡಲಾಗಿದೆ. ಶಾಲಾ ಆವರಣದಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ತಟ್ಟೆಗಳನ್ನು ತೊಳೆಯಲು ಪ್ರತ್ಯೇಕ ವ್ಯವಸ್ಥೆ,  ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು. ಶಾಲೆಯ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಸಹ ಜಾರಿ ಮಾಡಲಾಗಿದ್ದು. ಮುಖ್ಯ ಶಿಕ್ಷಕರು ನೀಡುವ ಉತ್ತರ ಹಾಗೂ ಸ್ಥಳ ಪರೀಶೀಲನಾ ವರದಿ ಸಮೇತ ವಿಷಯವನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸವಣ್ಣವರ ಲೋಕದರ್ಶನ ಪ್ರತಿಕೆಗೆ ಮಾಹಿತಿಯನ್ನು ತಿಳಿಸಿದ್ದಾರೆ.