ಹಜರತ್ ಸಯ್ಯದ್ ಶಾ ಮುರ್ತುಜಾ ಖಾದ್ರಿ ಉರಸೇ ಷರೀಫ್ ಅಂಗವಾಗಿ ರೈತರ ಖಾಲಿ ಗಡ್ಡಿ ಬಂಡಿ(ಚಕ್ಕಡಿ) ಸ್ಪರ್ಧೆ
Farmers' empty cart (chakkadi) competition as part of Hazrat Syed Shah Murtuza Qadri Urs-e-Sharif
ಹನುಮಸಾಗರ 07: ಪಟ್ಟಣದಲ್ಲಿ ಹಜರತ್ ಸಯ್ಯದ್ ಶಾ ಮುರ್ತುಜಾ ಖಾದ್ರಿ ಉರಸೇ ಷರೀಫ್ ಅಂಗವಾಗಿ ಅಬ್ದುಲ್ ಕಲಂ ಯುವಕರ ಸಂಘ ಹಾಗೂ ಕಟಗೇರ ಓಣಿ ರೈತರ ಸಹಯೋಗದಲ್ಲಿ ಶುಕ್ರವಾರ ರಂದು ಖಾಲಿ ಗಡ್ಡಿ ಬಂಡಿ(ಚಕ್ಕಡಿ) ಸ್ಪರ್ಧೆಯ ದಿವ್ಯ ಸಾನಿಧ್ಯ ವನ್ನು ಹಜರತ್ ಸೈಯದ್ ಶಾ ಮುರ್ತುಜಾ ಹುಸೇನಿ ಉಲ್ ಖಾದ್ರಿ ವಹಿಸಿದ್ದರು.ಖಾಲಿ ಗಡ್ಡಿ ಬಂಡಿ ಸ್ಪರ್ದೆಯನ್ನು ಹಸನಸಾಬ ದೋಟಿಹಾಳ ಕಾಡಾ ಅಧ್ಯಕ್ಷರು ಮುನಿರಾಬಾದ್ ಉದ್ಘಾಟಿಸಿ ಮಾತನಾಡಿ.ರೈತರ ಶಕ್ತಿ ಮತ್ತು ಎತ್ತುಗಳ ಮೇಲಿರುವ ಪ್ರೀತಿಯ ಪ್ರತೀಕವಾದ ಈ ಸ್ಪರ್ಧೆ ನಮ್ಮ ತಾಲೂಕಿನಲ್ಲಿ ನಡೆಸುತ್ತಿರುವುದು ಯುವ ಪೀಳಿಗೆಗೆ ಗ್ರಾಮೀಣ ಸಂಸ್ಕೃತಿಯನ್ನು ಪರಿಚಯಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ರುದ್ರಗೌಡ ಗೌಡಪ್ಪನವರ ಮತ್ತು ಸೂಚಪ್ಪ ಭೂವಿ ಜೋಡೆತ್ತುಗಳಿಗೆ ಪೂಜೆ ಸಲ್ಲಿಸಿ ಮಾತನಾಡಿ, ಗ್ರಾಮೀಣ ಯುವಜನರಲ್ಲಿ ಸಂಘಟನಾ ಮನೋಭಾವ ಬೆಳೆಯುವಲ್ಲಿ ಈ ರೀತಿಯ ಸ್ಪರ್ಧೆಗಳು ಉತ್ತಮವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಆರೋಗ್ಯಕರ ರೀತಿಯಲ್ಲಿ ಸಂಘಟನೆ ಮಾಡಬೇಕು ಎಂದು ಸಲಹೆ ನೀಡಿದರು.ಮಹಾಂತೇಶ ಅಗಸಿಮುಂದಿನ ಮಾತನಾಡಿ, ’ರೈತರ ಆದಾಯೋತ್ಪನ್ನ ಚಟುವಟಿಕೆಗಳಿಗೆ ಎತ್ತಿನ ಕರುಗಳು ತುಂಬಾ ಮುಖ್ಯವಾಗಿದ್ದು, ಆಧುನಿಕ ಯಂತ್ರೋಪಕರಣಗಳು ಬರುವ ಮುನ್ನ ರೈತನ ಜೀವನಾಡಿಯಾಗಿದ್ದು. ಆಧುನಿಕ ಕೃಷಿ ಪದ್ಧತಿಯ ಅಳವಡಿಕೆಯಿಂದಾಗಿ ಗ್ರಾಮೀಣ ಜನರಲ್ಲಿ ಎತ್ತುಗಳ ಸಾಕಾಣಿಕೆ ಕ್ಷೀಣಿಸಿರುವುದು ವಿಷಾದನೀಯ’ ಎಂದರು.ಈ ಸ್ಪರ್ಧೆಯಲ್ಲಿ 20 ಜೋಡೆತ್ತಗಳನ್ನು ಬಾಗಲಕೋಟೆ ,ಗದಗ ಬಿಜಾಪುರ ರಾಯಚೂರು, ಕೊಪ್ಪಳ,ಜಿಲ್ಲೆಯ ಎತ್ತುಗಳು ಭಾಗವಾಗಿ ವಹಿಸಿದವು
ಭಾಗವಹಿಸಿದ್ದರೇಣುಕಾ ಯಲ್ಲಮ್ಮ ದೇವಿ ಸಾ// ಹಿರೇಗೊನ್ನಾಗರಮಾಲಿಕತ್ವದ ಎತ್ತುಗಳು ಮಿಂಚಿನಂತೆ ಓಡುವುದರ ಮೂಲಕ ಪ್ರಥಮಸ್ಥಾನ ತನ್ನದಾಗಿಸಿಕೊಂಡಿದೆ,ದ್ವಿತೀಯ ಬಹುಮಾನ ವನ್ನು ಹೊಳೆ ಬಸವೇಶ್ವರ ಪ್ರಸನ್ನ ಮಾಚಕನೂರು ಗ್ರಾಮದ ಎತ್ತುಗಳು ಪಡೆದವು, ತೃತೀಯ ಬಹುಮಾನ ವನ್ನು ಶರಣಬಸವೇಶ್ವರ ಸಾ//ಜಿಗಳೂರು ನಾಲ್ಕನೇ ಬಹುಮಾನ ಮೌಲಾಸಾಬ ಹುಲಿಯಪುರ, ಐದನೇ ಬಹುಮಾನ ಕರ್ಣನ ಸಾಮ್ರಾಜ್ಯ ರೋಣ ತಾಲೂಕಿನ ಹೊಸಹಳ್ಳಿ ಗ್ರಾಮದ ಎತ್ತುಗಳು ಪಡೆದವು..ಮೈನುದೀನ್ ಖಾಜಿ,ವಿಶ್ವನಾಥ್ ಕನ್ನೂರ,ಸೂಚಪ್ಪ ಬೋವಿ, ಮಂಜುನಾಥ ಹುಲ್ಲೂರು, ಶಿವಪುತ್ರ್ಪ ಕಂಪ್ಲಿ, ಶಿವಾನಂದ ಹುಲ್ಲೂರು, ಅಬ್ದುಲ್ ರಜಾಕ್ ಟೇಲರ್,ಮೌಲಾಸಾಬ ಮೋಟಿಗಿ, ಮುತ್ತಣ್ಣ ಪತ್ತಾರ,ಹನುಮಂತ ಪೂಜಾರ, ಶೇಖಪ್ಪ ಸಜ್ಜನ, ಕಾಸಿಂ ಸಾಬ ಕಟಗಿ, ಹುಸೇನಸಾಬ ಕಟಗಿ, ಚಂದ್ರು ಹಿರೇಮನಿ,ಇಮಾಮ್ ಸಾಬ್ ಕಟಗಿ, ರಾಜಮಹ್ಮದ ಕಟಗಿ, ಹನುಮಂತಪ್ಪ ಬಿಂಗಿ,ಮೈಬುಸಾಬ ಕಟಗಿ,ಇತ್ತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 