ಸುಧೀರ್ಘ ತುಂಬು ಜೀವನ ಸವೆಸಿದ ಡಾ. ಬೆಂಗಳೂರು ಅವರ ನಿಧನ ರೋಟರಿ ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ : ಅಧ್ಯಕ್ಷ ಬಿ.ಜಿ. ಹಿರೇಮಠ
Dr. Bangalore's death, who lived a long and fulfilling life, is an irreparable loss to the Rotary o
ಸುಧೀರ್ಘ ತುಂಬು ಜೀವನ ಸವೆಸಿದ ಡಾ. ಬೆಂಗಳೂರು ಅವರ ನಿಧನ ರೋಟರಿ ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ : ಅಧ್ಯಕ್ಷ ಬಿ.ಜಿ. ಹಿರೇಮಠ
ರಾಣೇಬೆನ್ನೂರು 31: ನಗರದ ಹಿರಿಯ ವೈದ್ಯರಾಗಿ, ಬಡವರ ದೀನ ದಲಿತರ ಜನಸಾಮಾನ್ಯರ, ಸೇವೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ಸುಧೀರ್ಘ ತುಂಬು ಜೀವನ ಸವೆಸಿದ ಡಾ. ಬೆಂಗಳೂರು ಅವರ ನಿಧನ ರೋಟರಿ ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ ಎಂದು ರೋಟರಿ ಸೇವಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಹಿರೇಮಠ ಹೇಳಿದರು.
ಅವರು ಇಂದು ರೋಟರಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ, ಡಾ, ಎಸ್.ಸಿ. ಬೆಂಗಳೂರು ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಟಾಗೋರ್ ಶಿಕ್ಷಣ ಸಂಸ್ಥೆಯ ಛೇರ್ಮನ್ ಡಾ,ಬಸವರಾಜ ಕೇಲಗಾರ ಅವರು ರೋಟರಿ ಸಂಸ್ಥೆಯ ಸ್ಥಾಪನೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು, ಅಪಾರ ಸೇವೆ ಸಲ್ಲಿಸಿದ್ದರು. ಸಮಾಜಮುಖಿ ಕಾರ್ಯಗಳಲ್ಲಿ ಅತ್ಯುತ್ತಮ ಸಲಹೆ, ಸೂಚನೆ ನೀಡಿ ಉತ್ತಮ ಮಾರ್ಗದರ್ಶಕರಾಗಿದ್ದರು ಎಂದರು.
ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡ ಅನೇಕ ಗಣ್ಯರು ಮೃತರ ಸೇವಾ ಕಾರ್ಯಗಳ ಕುರಿತು ಸಾಧ್ಯಂತವಾಗಿ ಮಾತನಾಡಿ, ತಮ್ಮ ಭಾವನಾತ್ಮಕ ಸಂತಾಪ ಸೂಚಿಸಿದರು. ಸಭೆಯಲ್ಲಿ ಕಾರ್ಯದರ್ಶಿ
ಡಾಽಽನಾರಾಯಣ ಪವಾರ, ಮಾಜಿ ಕಾರ್ಯದರ್ಶಿಗಳಾದ ಕೆ. ವಿ. ಶ್ರೀನಿವಾಸ್, ಕುಮಾರ್ ಮುಷ್ಟಿ, ವೀರೇಶ್ ಹನಗೋಡಿಮಠ ,ವ್ಹಿ. ಪಿ. ಲಿಂಗನಗೌಡರ, ಗದಿಗೆಪ್ಪಗೌಡ ಹೊಟ್ಟಿಗೌಡರ, ಶಂಕರಗೌಡ ಮಾಳಗಿ, ಈಶ್ವರ್ ಪಾಟೀಲ್, ವ್ಹಿ. ಪಿ. ಪೊಲೀಸಗೌಡ್ರ, ಎಂ. ಆರ್. ಪಾಟೀಲ, ಉಮೇಶ್ ಪಟ್ಟಣಶೆಟ್ಟಿ, ಉಮೇಶ್ ಹೊನ್ನಾಳಿ, ಜಿ. ಎಸ್. ರಾಮಚಂದ್ರ ಜಗದೀಶ್ ಕಲ್ಯಾಣಿ, ಉಮೇಶ ಗುಂಡಗಟ್ಟಿ, ಶಿವಯೋಗಿ ಅಂಗಡಿ, ಎಫ್.ಬಿ. ಹೊನ್ನಳ್ಳಿ ಅರವಿಂದ್ ಜೈನ್, ಸೇರಿದಂತೆ ಈ ಶಿಕ್ಷಣ ಸಂಸ್ಥೆಯ ಸದಸ್ಯರು, ಇನ್ನಿತರ ಪದಾಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರು, ಪ್ರಾಧ್ಯಾಪಕರು, ಶಿಕ್ಷಕ ಶಿಕ್ಷಕೀಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎರಡು ನಿಮಿಷಗಳ ಕಾಲ ಮೌನಾಚರಿಸಿ, ಆತ್ಮಕ್ಕೆ ಶಾಂತಿ ಕೋರಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 