ಆಕರ್ಷಣೆಯಾಗಬೇಡಿ ಬದಲಿಗೆ ಆದರ್ಶವಾಗಿ
ಕೊಪ್ಪಳ 03 : ನೀವು ಇನ್ನೊಬ್ಬರಿಗೆ ಆಕರ್ಷಣೆಯಾಗಬೇಡಿ ಬದಲಿಗೆ ಆದರ್ಶವಾಗಿ, ಏಕೆಂದರೆ ಆಕರ್ಷಣೆ ಬೇಗ ಅಳಿಯುತ್ತದೆ ಆದರೆ ಆದರ್ಶ ಇತಿಹಾಸದ ಉದ್ದಕ್ಕೂ ಉಳಿಯುತ್ತದೆ ಎಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಡಾ, ಅನಿಲಕುಮಾರ ಬೇಗಾರ ಹೇಳಿದ್ದಾರೆ,ಈ ಕುರಿತು ಹೇಳಿಕೆ ನೀಡಿದ ಶೋಷಿತ ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರಲು ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಮತ್ತು ಮೀಸಲಾತಿ ದೊರಕಿಸಿ ಕೊಳ್ಳುವುದರ ಜೊತೆಗೆ ಸರ್ವರಿಗೆ ಸಮ ಬಾಳು ಸಮಪಾಲು ಸಾಮಾಜಿಕ ನ್ಯಾಯ ದೊರಕಿಸಿ ಕೊಡುವುದರ ಮೂಲಕ ಇಡೀ ವಿಶ್ವಕ್ಕೆ ಮಾದರಿ ಯಾದ ರೀತಿಯಲ್ಲಿ ನಮ್ಮ ಭಾರತ ದೇಶದ ಸಂವಿಧಾನ ಬರೆದ ಸಂವಿಧಾನ ಶಿಲ್ಪಿ ಡಾಟಟಬಿ ಆರ್ ಅಂಬೇಡ್ಕರ್ ರವರ ಹಸಿರಿನ ಮೇಲೆ ಮೇಲಿಂದ ಮೇಲೆ ಕೆಲ ದುಷ್ಟ ಶಕ್ತಿಗಳು ಅಪಮಾನ ಮಾಡುತ್ತಿದ್ದಾರೆ ಸಂವಿಧಾನ ಬದಲಿಸುವ ಹುನ್ನಾರ ಕೂಡ ನಡೆಸಿದ್ದಾರೆ ಇದು ವಿಪರ್ಯಾಸದ ಸಂಗತಿ ಯಾಗಿದೆ, ಪರಿಶಿಷ್ಟ ಜಾತಿ ಸಮುದಾಯಕ್ಕೆ ಇರುವ ಮೀಸಲಾತಿ ಮೇಲ್ವರ್ಗದ ಜನರಿಗೆ ನೀಡಿಬಿಡಿ ನಮಗೆಲ್ಲ ಸಾಮಾನ್ಯ ವರ್ಗಕ್ಕೆ ಸೇರಿಸಿಬಿಡಿ ಅವಾಗಲಾದರೂ ಇಲ್ಲಿ ಅವರಿಗೆ ನೆಮ್ಮದಿ ಸಿಗುತ್ತೇನೋ ನೋಡೋಣ ಎಂದು ಸಂವಿಧಾನ ಬಗ್ಗೆ ಮತ್ತು ಅಂಬೇಡ್ಕರ್ ಅವರ ಬಗ್ಗೆ ಕೆಲವರ ಗೊಂದಲದ ಹೇಳಿಕೆಗಳಿಂದ ಬೇಸರ ದಿಂದ ಮನನೊಂದು ಅಂಬೇಡ್ಕರ್ ಅವರ ಬಗ್ಗೆ ದುಷ್ಟರ ಕೆಲವು ಹೇಳಿಕೆಯನ್ನು ಖಂಡಿಸಿ ತೀವ್ರ ಕಳವಳ ವ್ಯಕ್ತಪಡಿಸಿದ ಅವರು ಈಗಿನ ಸಂದರ್ಭದಲ್ಲಿ ಗೋಡ್ಸೆ ಆಗುವುದು ಅತ್ಯಂತ ಸುಲಭದ ಕೆಲಸ ಕೈಯಲ್ಲಿ ಪಿಸ್ತೂಲು ಮೆದುಳಿನಲ್ಲಿ ವಿಷ ಹೃದಯದಲ್ಲಿ ದ್ವೇಷ ಇದ್ದರೆ ಸಾಕು, ಆದರೆ ಮಹಾತ್ಮಗಾಂಧಿ ಯಾಗುವುದು ಸುಲಭವಲ್ಲ, ಅದಕ್ಕೆ ಪ್ರೀತಿ ,ನಿಯತ್ತು ,ಬದ್ಧತೆ, ತ್ಯಾಗ, ಬಲಿದಾನ ,ಶ್ರಮ ,ಶ್ರದ್ಧೆ, ಭಕ್ತಿ, ಶಾಂತಿ, ಸೌಹಾರ್ದತೆ ,ಸರಳತೆ, ಎಲ್ಲವೂ ಬೇಕಾಗುತ್ತದೆ, ಇದು ಇಂದು ಕೆಲ ನಾಯಕರಲ್ಲಿ ಇಲ್ಲದಂತಾಗಿದೆ ಇದು ಕಳವಳಕಾರಿ ಮತ್ತು ಆತಂಕಕಾರಿ ವಿಷಯವಾಗಿದೆ ಎಂದು ತೀವ್ರ ಬೇಸರ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆಇತ್ತೀಚಿಗೆ ಕೇಂದ್ರದಲ್ಲಿ ಕೆಲವು ಬೆಳವಣಿಗೆಗಳು ಶೋಷಿತ ಸಮುದಾಯಗಳ ಮನಸ್ಸಿಗೆ ಬೇಸರ ಮತ್ತು ನೋವುಂಟು ಮಾಡುವ ಹಾಗೆ ವರ್ತನೆ ಕಂಡುಬರುತ್ತವೆ, ಸಂವಿಧಾನವೇ ಬದಲಾವಣೆ ಮಾಡ್ತೇವೆ ಎಂದು ಕೆಲವರು ರಾಜಾರೋಷವಾಗಿ ಹೇಳುತ್ತಿರುವುದನ್ನು ನೋಡಿದರೆ ಬಹಳ ಬೇಸರ ಉಂಟಾಗುತ್ತಿದೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ, ಪದೇ ಪದೇ ನಮ್ಮನ್ನು ಕೆಣಕಿಸುತ್ತಿರುವುದು ಒಳ್ಳೆಯದಲ್ಲ ಕೂಡಲೇ ಇದನ್ನು ನಿಲ್ಲಿಸಬೇಕು ಅದೇ ಎಲ್ಲರಿಗೂ ಸೂಕ್ತ, ಪರಿಶಿಷ್ಟ ಜಾತಿ ಸಮುದಾಯಕ್ಕೆ ಇರುವ ಮೀಸಲಾತಿ ತೆಗೆದು ಪದೇ ಪದೇ ಮೀಸಲಾತಿ ಕೇಳಲು ಹೊರಟಿರುವ ಕೆಲ ಮೇಲ್ವರ್ಗದ ಜನಾಂಗಕ್ಕೆ ಮೀಸಲಾತಿ ನೀಡಿ ಪರಿಶಿಷ್ಟ ಜಾತಿ ಸಮುದಾಯಗಳನ್ನು ಮೇಲ್ಜಾತಿಗೆ ಸೇರಿಸಿಬಿಡಿ ಕನಿಷ್ಠಪಕ್ಷ ಅದರಿಂದಲಾದರೂ ಶೋಷಣೆ ನಿಲ್ಲುವಂತಾಗಲಿ, ಶೋಷಿತರು ನೆಮ್ಮದಿಯಿಂದ ಬದುಕುವಂತಾಗಲಿ. ಹೀಗೆ ಪದೇ ಪದೇ ಕೆಣಕುತ್ತಿದ್ದರೆ ಮುಂಬರುವ ದಿನಗಳಲ್ಲಿ ಇದಕ್ಕೆ ಸೂಕ್ತವಾದ ಬೆಲೆ ತೆರ ಬೇಕಾಗುತ್ತದೆ. ಸಂವಿಧಾನದ ವಿಚಾರಕ್ಕೆ ಬಂದರೆ ಮತ್ತೊಮ್ಮೆಭೀಮಾ ಕೋರೆಗಾಂವ್ ಕದನ ನಡೆದೀತು ಎಚ್ಚರ ಎಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಡಾ.ಅನಿಲಕುಮಾರ ಬೇಗಾರ ನೊಂದ ಮನಸ್ಸಿನಿಂದ ತಮ್ಮ ಅಳಿಲ್ಲನ್ನು ತೊಡಿ ಕೊಂಡು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.