ರೈತರ ಜಮಿನುಗಳ ದಾಖಲೆ ಡಿಜಿಟಲಕರಣ ಮಾಡುವದರಿಂದ ರೈತರಿಗೆ ಆಗುವ ಮೋಸ ತೊಂದರೆ ತಡೆಗಟ್ಟಲಿದೆ : ಜಿಲ್ಲಾಧಿಕಾರಿ ಡಾ. ಆನಂದ ಕೆ
Digitization of farmers' land records will prevent fraud and trouble for farmers: District Collecto
ಆಲಮೇಲ: 25 : ತಹಶಿಲ್ದಾರ ಕಛೇರಿಗೆ ಜಿಲ್ಲಾಧಿಕಾರಿ ಬೇಟಿ ನೀಡಿ ಕಂಧಾಯ ಇಲಾಖೆಯ ಭೂ ಸುರಕ್ಷಾ ಯೋಜನೆಯಡಿ ಮೂಲ ದಾಖಲೆಗಳು ಡಿಜಿಟಲಕರಣಗೊಳಿಸು ಕಾರ್ಯ ಪ್ರಗತಿತಲ್ಲಿದ್ದು ಆದಸ್ಟು ಬೇಗ ಪೂರ್ಣಗೊಳಿಸಿ ಆನಲೈನ ವ್ಯವಸ್ಥೆ ವದಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೆಳಿದರು. ಬುಧವಾರ ಆಲಮೇಲ ತಹಶಿಲ್ದಾರ ಕಛೇರಿಗೆ ಬೇಟಿ ನೀಡಿ ತಾಲೂಕಿನ ವಿವಿದ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರೀಶೀಲನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೆಳಿದ ಅವರು. ರೈತರ ಜಮಿನುಗಳ ಎಲ್ಲ ದಾಖಲೆಗಳನ್ನು ಡಿಜಿಟಲಕರಣ ಮಾಡುವದರಿಂದ ರೈತರಿಗೆ ಯಾವುದೆ ಮೋಸ ತೊಂದರೆ ತಡೆಗಟ್ಟಲಿದೆ ಎಂದರು. ಬೂ ಯೋಜನೆ ಮೂಲಜ ರೈತರ ಜಮಿನಿನ ಮೂಲ ಧಾಖಲೆಗಳು ಡಿಜಿಟಲಕರಣ ಮಾಡಿ ಆನಲೈನ ವ್ಯವಸ್ಥೆ ಮಾಡಲಾಗುತ್ತಿದೆ.
ಎಲ್ಲವೂ ಆನೈನ ಬಳಿಕ ಯಾವುದೆ ಅ ವ್ಯವಹಾರ ನಡೆಯದಂತೆ ತಡೆಗಟ್ಟಲು ಸರ್ಕಾರ ಈ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಬೇಸಿಗೆ ಪ್ರಾರಂಭಗೊಂಡಿದ್ದು ಕುಡಿವ ನೀರಿನ ವ್ಯವಸ್ಥೆ ತೊಂದರೆಯಾಗದಂತೆ ಮುಂಜಾಗ್ರತೆಯ ಆಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಹಾಗೆ ಕುಡಿಯುವ ನೀರಿ ಯೋಜನೆ ಕುಂಟಿತಗೊಂಡಿದ್ದು ಅದನ್ನು ವ್ಯಗ ನೀಡಿ ಆದಸ್ಟು ಬೇಗ ಕಾಮಗಾರಿ ಪೂರ್ಣಗೊಳಿಸ ಸಂಬಂದ ಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಅತಿಕ್ರಮಣ ರಸ್ತೆ ತೆರವಿಗೆ ಮನವಿ. ದಲಿತ ಸಂಘಟನೆಯ ಮುಖಂಡ ಹರಿಶ ಎಂಟಮಟನ ರುಕುಂಪೂರ ರಸ್ತೆ ಅತಿಕ್ರಮಣಗೊಂಡಿದ್ದು ಅದನ್ನು ತೆರವು ಮಾಡಿ ಸಾರ್ವಜನಿಕ ಅನಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು.
ಅದಕ್ಕೆ ಜಿಲ್ಲಾಧಿಕಾರಿಗಳು ತಹಶಿಲ್ದಾರ ಮತ್ತು ಪಟ್ಟಣ ಪಂಚಾಯಿತಿ ಸಿಓ ಅವರಿಗೆ ರಸ್ತೆಯ ಮೂಲ ದಾಖಲೆಗಳನ್ನು ಪಡೆದುಕೊಂಡು ಅತಿಕ್ರಮಣ ಗೊಂಡಿದ್ದರೆ ಕಾನೂನು ರೀತಿ ಕ್ರಮಕೈಗೊಂಡು ತೆರವುಗೊಳಿಸಿ ಅತಿಕ್ರಮಣ ಆಗಿರದಿದ್ದರೆ ಯಾರಿಗೆ ಸಂಬಂದಿಸಿರುತ್ತದೆಯೋ ಅವರಿಗೆ ಪರಿಹಾರ ನಡಿ ತಮ್ಮ ವ್ಯಾಪ್ತಿಗೆ ಓಳಪಡಿಸುಕೊಳಬೇಕು ಈ ಕೆಲಸ ವಿಳಂಬ ಮಾಡದೆ ತುರ್ತಾಗಿ ಮಾಡಬೇಕು ಎಂದು ಸೂಚುಸಿದರು. ಹಾಗೆ ಪಟ್ಟಣದ ವಿವಿದ ಇಲಾಖೆಯ ಸರಕಾರಿ ಜಾಗವು ಉಳ್ಳವರ ಪಾಲಗಿದ್ದು ಈ ಬಗ್ಗೆನು ಪರೀಶೀಲಿಸಿ ಸರ್ಕಾರಿ ಜಾಗವನ್ನು ವಶಪಡಿಸಿಕೊಂಡು ಪಂಚಾಯಿಗೆ ಆದಯ ಮಾಡಿಕೊಳಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಿದರು.ಹಾಗೆ ಸಾರ್ವಜನಿಕ ಕುಂದುಕೊರತೆನು ಆಲಿಸಿದರು.ತಹಶಿಲ್ದಾರರ ಮಲ್ಲಿಕಾರ್ಜುನ ಅರಕೇರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ನಾಯಕ, ಕಂದಾಯ ನಿರಿಕ್ಷಕ ಎಂ.ಎ. ಅತ್ತಾರ, ಶಿರಸದ್ತಾರ ಪುಲಕೇಶಿ ಮೂಕಿಹಾಳ ಹಾಗೂ ವಿವಿದ ಇಲಾಖೆ ಅಧಿಕಾರಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 