ಉರ್ದು ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ: ಪೋಷಕ, ಶಿಕ್ಷಕರ ಸಭೆ
Children's Day celebration at Urdu High School: Parents, teachers meeting
ರಾಣೇಬೆನ್ನೂರು 17 : ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ, ಭ್ರಾತೃತ್ವ ಭಾವದಿಂದ ನಾವೆಲ್ಲರೂ ಭಾರತೀಯರಾಗಿ ಭಾವೈಕ್ಯತೆಯೊಂದಿಗೆ ಬಾಳಬೇಕಾದ ಅಗತ್ಯವಿದೆ ಎಂದು ಎಸ್ ಡಿ.ಎಂ.ಸಿ ಅಧ್ಯಕ್ಷ ಮುಜಮ್ಮಿಲ್ ಖತೀಬ ಕರೆ ನೀಡಿದರು. ಅವರು ತಾಲೂಕಿನ ಹಲಗೇರಿ ಗ್ರಾಮದ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಮತ್ತು ಪೋಷ,- ಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಲ್ಲಿ ನೈತಿಕತೆ ಬೆಳೆಯಬೇಕಾದರೆ, ಶಿಕ್ಷಕರಾದವರು ಶಿಕ್ಷಣದ ಜೊತೆ ಜೊತೆಗೆ ಸಂಸ್ಕೃತಿ ಆಚಾರ ವಿಚಾರ ಮತ್ತು ನೈತಿಕತೆ ಕುರಿತಂತೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದಾಗ ಮಾತ್ರ ಶಿಕ್ಷಕರ ಶ್ರಮ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್. ಡಿ.ಎಂ.ಸಿ.ಸದಸ್ಯರಾದ ರಫೀಕ್ ಖಾನ್ ಇಟಗಿ, ಐ.ಎ. ಖಾಜಿ, ಜಿಯಾವುಲ್ಲ ಚೂಡಿಗಾರ, ಮಹಮ್ಮದ್ ಯುಸುಫ ಹತ್ತಾರ, ಶಬೀರ್ ಅಹ್ಮದ್ ತಿಮ್ಮೇನಹಳ್ಳಿ, ರಭಿಯಾ ಕುಪ್ಪೇಲೂರ, ಯಾಸ್ಮಿನ್ ಭಾನು ಐರಣಿ, ಇರ್ಸಾದ್ ಅಹಮದ್ ಖಾಜಿ, ಮಮತಾ ಕೆ, ಮಿರ್ಜಾ, ರಿಯಾಜ್ ಬಿಕ್ಪಾ, ಕೆ.ಬಿ. ಸುಮಯ್ಯ ಕಾಟೇನಹಳ್ಳಿ, ದುರ್ಗದ, ಅಕ್ಕಮ್ಮ ಅಬ್ಬಿಗೇರಿ, ಸಲೀಂ ಪಿರಜಾದೆ, ಜೋಯ ಮುಜಾವರ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಾಧನೆ ನಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಮಹಮ್ಮದ್ ರಜಾ ಬಂಕಾಪುರ, ಕುರಾನ್ಖಾನ್, ಸಂಗಡಿಗರು ಕುರಾನ್ ಪ್ರಾರ್ಥಿಸಿದರು. ಶಾಲೆಯ ಮಕ್ಕಳು ದೇಶಭಕ್ತಿ ಗೀತೆ ಮತ್ತು ಭಾಷಣ ಸ್ಪರ್ಧೆ ನಡೆಸಿದರು. ಶಿಕ್ಷಕ ಐ.ಎ. ಖಾಜಿ, ಶಿಕ್ಷಕ ಜಗದೀಶ್ ಮಳೀಮಠ ಸ್ವಾಗತಿಸಿ, ಮ ಮುಖ್ಯೋಪಾಧ್ಯಾಯನಿ ಚಿತ್ರಾವತಿ ಬೆನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಕ್ಷಣಿಕ ಚಟುವಟಿಕೆಗಳನ್ನು ಐ.ಕೆ. ಮಿರ್ಜಾ ಪರಿಚಯಿಸಿದರು.ಕೆ ಮಮತಾ ನಿರೂಪಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 