‘ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕ್ರತಿ ಬೆಳೆಸಿಕೊಳ್ಳಬೇಕು’

‘ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕ್ರತಿ  ಬೆಳೆಸಿಕೊಳ್ಳಬೇಕು’ 'Students should cultivate culture and ethics'

ರಾಯಬಾಗ 08: ವಿದ್ಯಾರ್ಥಿಗಳು ಮೊಬೈಲ ದುಷ್ಟಚಟಗಳಿಂದ ದುರವಿದ್ದು ಸಾಮಾಜಿಕ ಸ್ವಾಸ್ಥ್ಯ ಕಾಪುಡುವುದರ ಜತೆಗೆ ಸಂಸ್ಕಾರ , ಸಂಸ್ಕ್ರತಿ  ಬೆಳೆಸಿಕೊಳ್ಳಬೇಕು. ವಿದ್ಯೆಗೆ ವಿನಯವೇ ಭೂಷಣ ಎನ್ನುವಂತ ಗುರುವಿನ ಗುಲಾಮರಾಗಿ ನಿರಂತರ ಅಧ್ಯಯನ ಮಾಡಿ ಕಲಿತ ಶಾಲೆಗೆ , ಶಿಕ್ಷಕರಿಗೆ , ತಂದೆ ತಾಯಿವರಿಗೆ ಗೌರವ  ತರುವ ಕೆಲಸ ಮಾಡಬೇಕು ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ನ್ಯಾಯವಾದಿಗಳು  ಎಲ್‌.ಬಿ.ಚೌಗುಲೆ ಹೇಳಿದರು.          

ಪಟ್ಣಣದ ಬಿ.ಎ. ಚೌಗುಲೆ ಶಿಕ್ಷಣ  ಸಂಸ್ಥೆಯ  ಚೌಗುಲೆ ಪಬ್ಲಿಕ ಶಾಲೆ  ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.           

ಕಾರ್ಯದರ್ಶಿ ವಿನಯ ಚೌಗುಲೆ,  ಪ್ರಾಚಾರ್ಯ. ಕೊಟ್ರೆಶ ಎಚ್‌.ಎಮ್,  ಎಸ್‌.ಎಸ್‌. ದಿಗ್ಗೇವಾಡಿ,  ಮುಸ್ತಕಾ ನಾಲಬಂದ,  ಸವಿತಾ ಮಡಿವಾಳ, ಅಶ್ವಿನಿ ಕೆಸ್ತೆಕರ, ತಸ್ಬಿಯಾ ಜಿನ್ನಾಬಡೆ, ಸಂದ್ಯಾ ಶಿಂಗೆ  ಸ್ವಾಗತಿಸಿ, ವರ್ಷಾ ಗಸ್ತಿ, ವಂದಿಸಿದರು.