ಧಾರವಾಡದಲ್ಲಿ ಶಿವಾನಂದ ಲಹರಿ ಸಾಹಿತ್ಯದ ಕಂಪು ಕಾರ್ಯಕ್ರಮ: ಸಾಧಕರಿಗೆ ಸನ್ಮಾನ
'Shivananda Lahari Sahityada Kampu' (Fragrance of Shivananda Lahari Literature) event in Dharwad: Ac
ಲೋಕದರ್ಶನ ವರದಿ
ಧಾರವಾಡ 10: ಆದಿಗುರು ಅದ್ವೈತ ತತ್ವಜ್ಞಾನಿ ಶ್ರೀ ಶಂಕರಾಚಾರ್ಯರು ಭಗವಾನ ಶಿವನ ಮಹಿಮೆಯನ್ನು ಕೊಂಡಾಡಲು ರಚಿಸಿದ ಅತ್ಯಂತ ಪ್ರಸಿದ್ಧ ಸ್ತ್ರೋತ್ರವೇ ‘ಶಿವಾನಂದ ಲಹರಿ’ ಈ ಕೃತಿ ಶಿವನ ಆನಂದದ ಅಲೆಗಳು ನಿರಂತರವಾಗಿ ಅನುಭವಿಸುವಂತೆ ಮಾಡುವ ದಿವ್ಯ ಕಾವ್ಯವಾಗಿದೆ ಎಂದು ಕರ್ನಾಟಕ ಕಾಲೇಜಿನ ಅತಿಥಿ ಉಪನ್ಯಾಸಕ ಡಾ. ಚಿದಾನಂದ ಮಾಸನಕಟ್ಟಿ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ ವೀರ್ಪ ವೀರಭದ್ರ್ಪ ನಾಗಶೆಟ್ಟಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ‘ಶ್ರೀ ಶಿವಾನಂದ ಲಹರಿ ಸಾಹಿತ್ಯದ ಕಂಪು’ ವಿಷಯ ಕುರಿತು ಮಾತನಾಡಿದರು.
ಶಿವಾನಂದ ಲಹರಿಯು 100 ಸಂಸ್ಕೃತ ಶ್ಲೋಕಗಳನ್ನೊಳಗೊಂಡಿದೆ. ಇದನ್ನು 1956 ರಲ್ಲಿ ವೀರ್ಪ ನಾಗಶೆಟ್ಟಿ ಓರ್ವ ಶಿಕ್ಷಕರಾಗಿ ಸಂಸ್ಕೃತದಲ್ಲಿದ್ದ ಸ್ತ್ರೋತ್ರಗಳನ್ನು ಹಳಗನ್ನಡಕ್ಕೆ ಅನುವಾದಿಸಿದರು. ಹಳಗನ್ನಡ ಇಂದಿನ ತಲೆಮಾರಿನವರಿಗೆ ಓದಲು, ಅರ್ಥ ಮಾಡಿಕೊಳ್ಳಲು ಅಷ್ಟು ಸರಳವಲ್ಲ. ಹೀಗಾಗಿ ಅದನ್ನು ಕನ್ನಡಕ್ಕೆ ಸರಳಾನುವಾದ ಮಾಡುವ ಕಾರ್ಯ ಮಾಡಲಾಗಿದೆ. ದಿ. ವೀರ್ಪ ನಾಗಶೆಟ್ಟಿ ಕನ್ನಡ, ಸಂಸ್ಕೃತ, ಹಳೆಗನ್ನಡದ ವಿದ್ವತ್ಪೂರ್ಣ ಪಂಡಿತರಾಗಿದ್ದರು.
ಮೂರೂ ಭಾಷೆಗಳಲ್ಲಿ ಆಳವಾಗಿ ಅಧ್ಯಯನ ಮಾಡಿ ಅನೇಕ ಅಮೂಲ್ಯ ಕೃತಿ ರಚಿಸಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಅಪ್ರಕಟಿತ ನೂರಾರು ಕೃತಿಗಳು ಇನ್ನೂ ಹಸ್ತಪ್ರತಿಗಳಲ್ಲಿದ್ದು, ಅವೂ ಸಹ ಒಂದೊಂದಾಗಿ ಪ್ರಕಟಿಸುವಂತೆ ಮಾಡಲಾಗಿದೆ. ಸೃಜನಶೀಲ ಬರಹಗಾರರಾದ ವೀರ್ಪನವರು ಕಂಬಿ ಬಸವಾರ್ಯರ ಪ್ರೀತಿಯ ಶಿಷ್ಯರಾಗಿದ್ದು ವಿಶೇಷ. ಶಿವಾನಂದ ಲಹರಿ ಮನಸ್ಸಿಗೆ ಆನಂದ ಉಂಟುಮಾಡಿ, ಏಕಾಗ್ರತೆ ಹೆಚ್ಚಿಸುವ ಕೃತಿಯಾಗಿದ್ದು ಎಲ್ಲರೂ ಓದುವಂತಾಗಬೇಕೆಂದು ಹೇಳಿದರು.
ಸಾಧಕರಾದ ಡೈಟ್ನ ವಿಶ್ರಾಂತ ಉಪನ್ಯಾಸಕ ಕೆ. ಜಿ. ದೇವರಮನಿ ದತ್ತಿದಾನಿಗಳ ಪರವಾಗಿ ಸನ್ಮಾನ ಸ್ವೀಕರಿಸಿ ಪ್ರತಿಕ್ರಿಯಿಸಿ, ನಾನು ಮತ್ತು ಸದಾನಂದ ನಾಗಶೆಟ್ಟಿ ಡೈಟ್ನಲ್ಲಿ ಆತ್ಮೀಯ ಸ್ನೇಹಿತರಾಗಿದ್ದವರು. ಸದಾನಂದ ಕಠಿಣ ವಿಷಯಗಳನ್ನೂ ಸರಳೀಕೃತಗೊಳಿಸಿ ಬೋಧಿಸುವ ಕಲೆ ಕರಗತ ಮಾಡಿಕೊಂಡಿದ್ದರು. ಅವರ ವಿಶೇಷ ಗುಣ, ಪ್ರಯೋಗಶೀಲತೆಯಾಗಿತ್ತು. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿದ್ದರೆಂದು ಸ್ಮರಿಸಿ ಈ ಪ್ರಶಸ್ತಿ ನನ್ನ ಗೌರವ ಹೆಚ್ಚಿಸಿದೆ ಎಂದರು.
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ 