'ಪೋಷಕರು ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸಬೇಕು'

'ಪೋಷಕರು ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸಬೇಕು' 'Parents should encourage children to attend cultural events'

ರಾಯಬಾಗ 08;  ಪಾಠದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜ್ಞಾನ ಹೆಚ್ಚಿಸಿಕೊಳ್ಳಬಹುದು ಎಂದು ಸಂಸ್ಥೆಯ  ಅಧ್ಯಕ್ಷ ಬಾಹುಸಾಹೇಬ ಬಂಡು ಪಾಟೀಲ ಹೇಳಿದರು. ತಾಲ್ಲೂಕಿನ  ನಸಲಾಪುರ ಗ್ರಾಮದಲ್ಲಿ ಶ್ರೀ ಏಲಾಚಾರ್ಯ  ವಿದ್ಯಾನಂದ ಶಿಕ್ಷಣ ಸಂಸ್ಥೆಯ ಕರ್ಮಯೋಗಿ ಚಾರುಕೀರ್ತಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸನ್ 2025- 26 ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.                    

ಇಂದು ಮಕ್ಕಳು ಮೊಬೈಲ್ನಲ್ಲಿ ಬಹಳ ಕಾಲ ಕಳೆಯುತ್ತಿರುವುದು ಬೇಸರದ ಸಂಗತಿ. ಪೋಷಕರಾದವರು ಮೊಬೈಲ್ ಕೊಡಬೇಡಿ. ಸಾಂಸ್ಕೃತಿಕ, ಕ್ರೀಡೆಗಳಲ್ಲಿ ಭಾಗವಹಿಸುವ ಹಾಗೆ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.        

ಕಾರ್ಯದರ್ಶಿ ಡಾಟಟ ಸಂಜಯ ದಾದಾಸಾಹೇಬ ಪಾಟೀಲ , ಅಶೋಕ ಸಮಾಜೆ, ಚಂದ್ರಕಾಂತ ಕಾಂತೆ, ಬಾಹುಬಲಿ ಹಸುರೇ, ಶ್ರೀಕಾಂತ ಹಸುರೇ, ಅಣ್ಣಾಪಾ ಮಗದುಮ ಮುಖ್ಯೋಧ್ಯಾಪಕ ಎಸ್ ಹೆಚ್ ಪಾಟೀಲ, ಆರ್ ಎಂ ಪಾಟೀಲ ಸೇರಿದಂತೆ ಸಂಸ್ಥೆಯ   ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.