’ಕನ್ನಡ ಕಾವ್ಯ ಗಮಕ ಅನುಸಂಧಾನ' ಸರ್ಟಿಫಿಕೇಟ್ ಕೋರ್ಸ್
'Kannada Poetry Grammar Approach' Certificate Course
ಬಾಗಲಕೋಟೆ 17: ಕಾವ್ಯಗಳಲ್ಲಿರುವ ಸ್ವರಗಳನ್ನು ಆಲಾಪನೆ ಮಾಡುತ್ತಾ ಮನಸ್ಸಿನಲಿ ಆನಂದವನ್ನು ಅನುಭವಿಸುವುದೇ ಗಮಕಲೆ ಎಂದು ಸಂಗೀತ ಕ್ಷೇತ್ರದ ಮಹಾ ವಿದ್ವಾಂಸರಾದ ವಿದ್ವಾನ್ ಪಂಡಿತ್ ಡಾ ಕಾಶಿಲಿಂಗಯ್ಯ ಮಠ ಅವರು ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಮತ್ತು ಸಂಗೀತ ವಿಭಾಗದ ಸಂಯುಕ್ತ ಆಶ್ರಯದಲ್ಲಿ ’ಕನ್ನಡ ಕಾವ್ಯ ಗಮಕ ಅನುಸಂಧಾನ" ಎಂಬ ಸರ್ಟಿಫಿಕೇಟ್ ಕೋರ್ಸ್ ನ ಪ್ರಥಮ ತರಗತಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕನ್ನಡ ಕಾವ್ಯಗಳನ್ನು ಸಂಗೀತಕ್ಕೆ ಅಳವಡಿಸಿ ಹಾಡಿದಾಗ ಮಾತ್ರ ಕಾವ್ಯಗಳು ಜನಮನದಲ್ಲಿ ಕಾಲದಿಂದ ಕಾಲಕ್ಕೆ ತಲೆಮಾರಿನಿಂದ ತಲೆಮಾರಿಗೆ ಉಳಿದುಕೊಂಡು ಬರುತ್ತವೆ ಎಂದು ತಿಳಿಸಿದರು.
ನಂತರ ಕವಿರಾಜಮಾರ್ಗ ಕಾವ್ಯ ಮೂರು ಪದ್ಯಗಳನ್ನು ಗಮಕಲೆಯಲ್ಲಿ ಹಾಡಿದರು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಆರ್ ನಾಗರಾಜ್ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸರ್ಟಿಫಿಕೇಟ್ ಕೋರ್ಸ್ನ ಸಂಯೋಜಕರಾದ ಡಾ ಎಸ್ ಡಿ ಕೆಂಗಲಗುತ್ತಿ ಅವರು ಸ್ವಾಗತಿಸಿ ಕಾವ್ಯಗಳನ್ನು ವ್ಯಾಖ್ಯಾನ ಮಾಡಿದರು. ಕನ್ನಡ ಪ್ರಾಧ್ಯಾಪಕರಾದ ಡಾ. ವಿರುಪಾಕ್ಷಿ ಏನ್ ಬಿ ಅವರು ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 