‘ನ್ಯಾಯಾಧೀಶ ಡಿ.ಎಸ್.ನಕ್ಕರ್ ಸದಾ ಸ್ಮರಣೀಯರು’
'Judge D.S. Nakkar will always be remembered'
ರಾಯಬಾಗ 18: ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ನಿವೃತ್ತಿ ನಂತರ ನಿವೃತ್ತ ವೇತನ ನೀಡಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿ ಹೋರಾಟ ಮಾಡಿದ ಪಿಂಚಣಿದಾರರ ಪಿತಾಮಹ, ನ್ಯಾಯಾಧೀಶ ಡಿ.ಎಸ್.ನಕ್ಕರ್ ಅವರು ಸದಾ ಸ್ಮರಣೀಯವಾಗಿದ್ದಾರೆ ಎಂದು ನಿವೃತ್ತ ಬಿಇಒ ಹಣಮಂತ ಭಜಂತ್ರಿ ಹೇಳಿದರು.
ಬುಧವಾರ ಪಟ್ಟಣದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಪಿಂಚಣಿದಾರರ ಪಿತಾಮಹ ಡಿ. ಎಸ್. ನಕ್ಕರ್ ಅವರ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿ. ಎಸ್. ನಕ್ಕರ್ ಮುಂಬೈ ನಗರದಲ್ಲಿ 1914ರಲ್ಲಿ ಜನಿಸಿ, ಕಾನೂನು ಪದವಿ ಪಡೆದು, ಮುಂಬೈ ಹೈಕೋರ್ಟಿನಲ್ಲಿ ವಕೀಲ ವೃತ್ತಿ ಜೀವನ ಆರಂಭಿಸಿ, ನಂತರ ಹೈಕೋರ್ಟಿನ ನ್ಯಾಯಾಧೀಶರಾಗಿ ಉತ್ತಮ ಸೇವೆಯನ್ನು ಸಲ್ಲಿಸಿದ ಇವರು, ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದರು. ನಿವೃತ್ತಿ ನಂತರ ಕೇಂದ್ರ, ರಾಜ್ಯ ಸರ್ಕಾರಿ ನೌಕರರಿಗೆ ನಿವೃತ್ತಿ ವೇತನ ಕೊಡಿಸಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ 1956 ರಲ್ಲಿ ದಾವೆ ಹೂಡಿ, ಸತತ 10 ವರ್ಷಗಳ ಕಾಲ ಹೋರಾಟ ನಡೆಸಿ, ದೇಶದ ಎಲ್ಲಾ ನಿವೃತ್ತ ನೌಕರಿಗೆ ನಿವೃತ್ತಿ ವೇತನ ಕೊಡಿಸಲು ಯಶಸ್ವಿಯಾದರು. ಅದಕ್ಕಾಗಿ ಇವರನ್ನು ಪಿಂಚಣಿದಾರರ ಪಿತಾಮನೆಂದು ನೌಕರರ ಬಳಗವು ಕರೆಯುತ್ತಾರೆ ಎಂದು ತಿಳಿಸಿದರು.
ಸರ್ಕಾರಿ ನಿವೃತ್ತ ಸಂಘ ಅಧ್ಯಕ್ಷ ಎಸ್. ಎಸ್.ಮೀಸೆ, ಎಸ್.ಡಿ.ಚಲವಾದಿ, ಅಪ್ಪಾಸಾಹೇಬ ಮುಗಳಖೋಡ, ಎಮ್.ಆರ್. ಮಠದ, ಎಸ್.ಎಸ್. ಕುಂದರಗಿ, ಜಿ.ಎಸ್. ಜುಮ್ಮಯ್ಯಿ, ಎಸ್.ಐ .ಅಲಾಸೆ, ಎಮ್.ಕೆ .ಶಿವಕ್ಕ ನ್ನವರ, ಪಿ.ಎಸ್.ಕುಲಗುಡೆ, ವ್ಹಿ.ಎಸ್.ಗುಣಕೆ, ಎಮ್.ಕೆ ಮಡಿವಾಳ, ಅಶೋಕ ದೇಶಿಂಗೆ ಸೇರಿ ಸಂಘದ ಸದಸ್ಯರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 