ಸನ್ಮತಿ ವಿದ್ಯಾಲಯದಲ್ಲಿ ಗುರುವಂದನೆ, ಸ್ನೇಹಮಿಲನ ಕ್ಷಮಿಸುವ, ಕ್ಷೇಮೆ ಕೇಳುವ ಗುಣ ಗುರುವಿನಲ್ಲಿ ಮಾತ್ರ ಕಾಣಬಹುದು: ಎ.ಬಿ. ಪಾಟೀಲ
'Guruvandana' and a friendly gathering at Sanmati Vidyalaya; the qualities of forgiveness and concer
ಲೋಕದರ್ಶನ ವರದಿ
ಕಾಗವಾಡ 27: ಕ್ಷಮಿಸುವ ಮತ್ತು ಕ್ಷೇಮೆ ಬೇಡುವ ಗುಣಗಳು ಕೇವಲ ಗುರುವಿನಲ್ಲಿ ಮಾತ್ರ ಕಾಣಬಹುದಾಗಿದ್ದು, ತಮ್ಮ ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಕ್ಷಮಿಸುವ, ತಮ್ಮಿಂದ ತಪ್ಪಾಗಿದೆ ಎಂದೆನಿಸಿದಾಗ ಮುಲಾಜಿಲ್ಲದೇ ಕ್ಷೇಮೆ ಕೇಳಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಗುರುಗಳಿಗೆ ಬರೊಬ್ಬರಿ 50 ವರ್ಷಗಳ ನಂತರ ಸನ್ಮಾನಿಸುತ್ತಿರುವುದು ನಿಜಕ್ಕೂ ಗೌರವದ ವಿಷಯವಾಗಿದೆ ಎಂದು ಬೆಳಗಾವಿಯ ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಶಾಲೆ ಮತ್ತು ಕಾಲೇಜು ಆಡಳಿತ ಮಂಡಳಿಯ ಸದಸ್ಯ ಎ.ಬಿ. ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.
ಅವರು, ರವಿವಾರ ದಿ. 26 ರಂದು ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯದ ಸನ್ 1975-76 ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪುನರಮಿಲನ ಮತ್ತು ಗುರುವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು. 50 ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಕಲಿತು, ಇದೇ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ನಿವೃತ್ತಿಯಾಗಿ ಈಗ ಸಂಸ್ಥೆಯ ಶಾಲಾ-ಕಾಲೇಜು ಆಡಳಿತ ಮಂಡಳಿಯ ಸದಸ್ಯನಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ನಾವೆಲ್ಲಾ ವರ್ಗ ಮಿತ್ರರು ಸೇರಿ ಕಲಿತ ಶಾಲೆಗೆ ಏನಾದರೂ ಸೇವೆ ಮಾಡಬೇಕೆಂಬ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಅಗಲಿದ ಗುರುಗಳ ಹೆಸರುಗಳ ಅಚ್ಚು ಉಳ್ಳ ಭಾವಚಿತ್ರದ ಪೂಜೆ ನೆರವೇರಿಸಿ, ಅಗಲಿದ ವರ್ಗ ಮಿತ್ರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಮಗೆ ಕಲಿಸಿದ ಗುರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3 ನೇ ರಾ್ಯಂಕ್ ಪಡೆದ ಸಂತೋಷ ರತ್ನಪ್ಪಗೋಳ ಅವರ ತಂದೆಯವರನ್ನು ಸನ್ಮಾನಿಸಲಾಯಿತು. ಈಗ ನಿವೃತ್ತ ಜೀವನ ನಡೆಸುತ್ತಿರುವ ವರ್ಗ ಮಿತ್ರರು,
50 ವರ್ಷಗಳ ಹಿಂದಿನ ದಿನಗಳನ್ನು ಮೆಲುಕುಹಾಕಿ ಭಾವುಕರಾದರು. ನಿವೃತ್ತ ಶಿಕ್ಷಕರಾದ ಬಿ.ಬಿ. ಪಾಟೀಲ, ಬಿ.ಜೆ. ಕುರುಂದವಾಡೆ, ಬಿ.ಆರ್. ಜಠಾರ, ಎಂ.ಡಿ. ಅಲಾಸೆ, ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ ಸೇರಿದಂತೆ ಸನ್ 1975-76 ನೇ ಸಾಲಿನ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಸ್.ಎಸ್. ಹಿರೇಮಠ ಸ್ವಾಗತಿಸಿ, ನಿರೂಪಿಸಿದರು. ರವೀಂದ್ರ ಕೋರೆ ವಂದಿಸಿದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 