ನ.6 ರಂದು ‘ಧರೆಗೆದೊಡ್ಡವರು’ ಕಾರ್ಯಕ್ರಮ

ನ.6 ರಂದು ‘ಧರೆಗೆದೊಡ್ಡವರು’ ಕಾರ್ಯಕ್ರಮ 'Dharegedoddavaru' program on November 6th

ಧಾರವಾಡ 05: ನಾಡಿನ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ಕರ್ನಾಟಕ ರಾಜ್ಯೋತ್ಸವ ನಾಡಹಬ್ಬ-2025 ರ ಅಂಗವಾಗಿ 2025 ನವ್ಹಂಬರ 1 ರಿಂದ 30ರವರೆಗೆ ತಿಂಗಳ ಪೂರ್ಣ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದಿನಾಂಕ 06-11-2025 ರಂದುಬೆಳಿಗ್ಗೆ 11 ಗಂಟೆಗೆ ‘ಧರೆಗೆದೊಡ್ಡವರು’ ಕಾರ್ಯಕ್ರಮವನ್ನು ಆಯೋಜಿಸಿದೆ. 

ಆಥಣಿ ವಿಮೋಚನಾ ಸಂಸ್ಥೆಯ ಅದ್ಯಕ್ಷರಾದ ಬಿ.ಎಲ್‌. ಪಾಟೀಲ’ ಅವರು ‘ಧರೆಗೆದೊಡ್ಡವ’ರಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು. ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅವರು    ‘ಬಿ.ಎಲ್‌. ಪಾಟೀಲ ಅವರ ಬದುಕು-ಬರಹ’ ಕುರಿತು ಮಾತನಾಡುವರು. ಅಂಜುಮನ್ ಮಹಾವಿದ್ಯಾಲಯದ 300 ವಿದ್ಯಾರ್ಥಿಗಳು ‘ಚರ್ಚೆ-ಸಂವಾದ’ದಲ್ಲಿ ಭಾಗವಹಿಸುವರು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.