‘ಸಹಕಾರಿ ಸಂಘ ನಡೆಯಲು ನಾಗರಿಕರ ಸಹಕಾರ ಅವಶ್ಯ’
'Citizen cooperation is essential for a cooperative society to function'
ನೇಸರಗಿ 09: ರೈತರಿಗೆ, ನಾಗರಿಕರಿಗೆ ಸಹಕಾರಿ ಸಂಘದಿಂದ ಸಹಾಯ ಸಹಕಾರದ ಮೂಲಕ ಸೇವೆ ಸಲ್ಲಿಸಲಾಗುತ್ತಿದೆ ಎಂದು ವಣ್ಣೂರ ಪಿಕೆಪಿಎಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ ಹೇಳಿದರು.
ಸಮೀಪದ ವಣ್ಣೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಹಕಾರಿ ಸಂಘ ನಡೆಯಲು ನಾಗರಿಕರ ಸಹಕಾರ ಅವಶ್ಯವಾಗಿದೆ. ನಾಗರಿಕರ ಒತ್ತಾಯದಂತೆ ಪೆಟ್ರೋಲ್ ಪಂಪ, ಎಟಿಎಂ ನಿರ್ಮಾಣ ಕಾರ್ಯಕ್ಕೆ ಪ್ರಯತ್ನಿಸಲಾಗುವುದು ಎಂದರು.
ಉಪಾಧ್ಯಕ್ಷ ನಾಗಪ್ಪ ಬಸೆಟ್ಟಿ, ಬಾಬಾಸಾಹೇಬ ದೇಸಾಯಿ, ಸಣ್ಣಿಂಗಪ್ಪ ಅಡಿವೇರ, ನಿಂಗಪ್ಪ ಇಂಚಲ, ಬಾಳಪ್ಪ ಅಂಗಡಿ, ಸದೆಪ್ಪ ಖಿಲಾರಿ, ಮಹಾದೇವಿ ಹುಡೇದ, ಲಕ್ಷ್ಮವ್ವ ಪಾಟೀಲ, ಗಂಗಪ್ಪ ಆಡಿನವರ, ಚನ್ನಪ್ಪ ಮ್ಯಾಗೇರಿ, ಹಣಮಂತ ದೊಡ್ಡಣ್ಣವರ, ಬಸಲಿಂಗಪ್ಪ ಬಸೆಟ್ಟಿ, ನಾಗಪ್ಪ ಮುತ್ತೆನ್ನವರ, ಸಿದ್ದಪ್ಪ ಮಿಂಡೊಳ್ಳಿ ಮೊದಲಾದವರು ಇದ್ದರು.
ಕಾರ್ಯದರ್ಶಿ ರಮೇಶ ಹೊಸಮನಿ ವರದಿ ವಾಚಿಸಿ, ವಂದಿಸಿದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 